Advertisement

Theft: ಅಂಗನವಾಡಿ ಕಾರ್ಯಕರ್ತೆಯ ಬೆದರಿಸಿ ಮಾಂಗಲ್ಯ ಸರ ಅಪಹರಿಸಿದ ಕಳ್ಳ!

07:28 PM Aug 24, 2024 | Esha Prasanna |

ಹೊಸನಗರ : ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಕರ್ತೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಚಾಕು ತೋರಿಸಿ ಬೆದರಿಸಿ ಅಪಹರಣ ಮಾಡಿರುವ  ಘಟನೆ ತಾಲೂಕಿನ ಪುರಪ್ಪೆಮನೆ ಸಮೀಪದ ಹೆಬ್ಬೈಲುನಲ್ಲಿ ನಡೆದಿದೆ.

Advertisement

ಹೆಬ್ಬೈಲು ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಕರ್ತೆ ತಾರಾಮತಿ ಒಬ್ಬರೇ ಇರುವುದು  ಗಮನಿಸಿದ ಕಳ್ಳ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಚಾಕು ತೋರಿಸಿ ಬೆದರಿಸಿದ್ದಾನೆ. ಆಗ ಕಾರ್ಯಕರ್ತೆ ಹೆದರಿ ಕುಳಿತಾಗ ಅವರ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ನಂತರ ಕಾರ್ಯಕರ್ತೆ ಕೂಗು ಕೇಳಿ ಪಕ್ಕದ ಶಾಲಾ ಶಿಕ್ಷಕರು ಬಂದು ನೋಡುವಷ್ಟರಲ್ಲಿ ಕಳ್ಳ ಓಡಿ ಹೋಗಿದ್ದ.

ಅಂಗನವಾಡಿ ಕೇಂದ್ರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ನಾನು ಒಬ್ಬಳೆ ಇದ್ದಾಗ ಹಿಂದಿನಿಂದ ಬಂದ ಕಳ್ಳ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾನೆ. ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ.  ಸುಮಾರು 42 ಗ್ರಾಂನಷ್ಟಿದ್ದ ಮಾಂಗಲ್ಯ ಸರವು  ರೂ. 3.20 ಲಕ್ಷ ಬೆಲೆ ಬಾಳುತ್ತಿತ್ತು ಎಂದು ತಾರಾಮತಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next