Advertisement

Badiyadka ಕೊಲ್ಲಿಯಿಂದ ಕಳುಹಿಸಿಕೊಟ್ಟ ಚಿನ್ನ ಸಹಿತ ನಾಪತ್ತೆಯಾದ ಯುವಕ ಠಾಣೆಯಲ್ಲಿ ಶರಣು

12:01 AM Oct 11, 2023 | Team Udayavani |

ಬದಿಯಡ್ಕ: ಕೊಲ್ಲಿಯಿಂದ ಕಳುಹಿಸಿಕೊಟ್ಟ ಚಿನ್ನ ಸಹಿತ ನಾಪತ್ತೆಯಾದ ಮುನಿಯೂರು ನಿವಾಸಿ 28ರ ಹರೆಯದ ಯುವಕ ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ.

Advertisement

ಕಳೆದ ತಿಂಗಳ 25ರಂದು ಯುವಕ ನಾಪತ್ತೆಯಾಗಿದ್ದ. ಶಾರ್ಜಾದಿಂದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಯುವಕ ಮನೆಗೆ ಫೋನ್‌ ಕರೆ ಮಾಡಿ ಊರಿಗೆ ಬರುವ ವಿಷಯ ತಿಳಿಸಿದ್ದನು. ಆದರೆ ಅನಂತರ ಯುವಕನ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆತನ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್‌x ಆಫ್‌ ಆಗಿತ್ತು.

ವಿಮಾನ ನಿಲ್ದಾಣದಲ್ಲಿಳಿದು ಒಂದು ದಿನ ಕಳೆದರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಯುವಕನಿಗಾಗಿ ಎಲ್ಲೆಡೆ ಶೋಧ ನಡೆಸಿದರೂ ಸುಳಿವು ಲಭಿಸಲಿಲ್ಲ. ಈ ಮಧ್ಯೆ ಕೊಲ್ಲಿಯಿಂದ ಕಳುಹಿಸಿಕೊಟ್ಟ ಚಿನ್ನ ಸಹಿತ ಯುವಕನನ್ನು ಅಪಹರಿಸಲಾಗಿದೆಯೆಂಬ ಸುದ್ದಿಯೂ ಕೇಳಿ ಬಂದಿತ್ತು. ಚಿನ್ನದ ವಾರಸುದಾರರು ಮನೆಗೆ ಬಂದು ಬೆದರಿಕೆ ಕೂಡ ಹಾಕಿದ್ದರು. ಈ ಸಮಯದಲ್ಲಿಯೇ ಯುವಕ ಬದಿಯಡ್ಕ ಠಾಣೆಯಲ್ಲಿ ಶರಣಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next