Advertisement

ರಸ್ತೆ ಅಪಘಾತದಲ್ಲಿ ಯುವಕ ದುರ್ಮರಣ

11:14 AM Oct 25, 2018 | |

ಮಹದೇವಪುರ: ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು. ಗ್ಯಾಸ್‌ ಸಿಲಿಂಡರ್‌ ತುಂಬಿದ್ದ ಲಾರಿ ಸುಟ್ಟು ಕರಕಲಾದ ಘಟನೆ ಅವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಟುಗೊಲ್ಲಹಳ್ಳಿ ಬಸ್‌ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.

Advertisement

ನಗರದ ಸಾರಾಯಿಪಾಳ್ಯದ ನಿವಾಸಿ ಬಸವ ರಾಜ್‌ (17) ಮೃತಪಟ್ಟ ದುರ್ದೈವಿ. ಜಕ್ಕೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಸವರಾಜ್‌, ದೇವನಹಳ್ಳಿ ಸಮೀಪದ ಕೊನಗಿನಬೆಲೆಯಲ್ಲಿರುವ ಅಜ್ಜಿ ಮನೆಗೆ ಹೋಗಿ ವಾಪಸ್‌ ಬರುವಾಗ ಕಿರಿದಾದ ರಸ್ತೆಯಲ್ಲಿ
ಗ್ಯಾಸ್‌ ಸಿಲಿಂಡರ್‌ ತುಂಬಿದ ಲಾರಿಯನ್ನು ಒವರ್‌ ಟೇಕ್‌ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಎದುರಿನಿಂದ ಬಂದ ಇಂಡಿಕಾ ಕಾರು ದ್ವಿಚಕ್ರ ವಾಹನಕ್ಕೆ ತಗುಲಿದೆ. ಇದರಿಂದ ಆಯತಪ್ಪಿದ ಬಸವರಾಜ್‌, ಬೈಕ್‌ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದು, ಮುಖಕ್ಕೆ ತೀವ್ರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವದಿಂದ
ಬಸವರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಅಪಘಾತದ ವೇಳೆ ಬಸವರಾಜ ಹಾರಿಕೊಂಡ ನಂತರ ಬೈಕ್‌, ಹಿಂದೆ ಬರುತ್ತಿದ ಗ್ಯಾಸ್‌ ಸಿಲಿಂಡರ್‌ ತುಂಬಿದ ಲಾರಿಯ ಕೆಳಗೆ ಸಿಲುಕಿದ್ದು, ಸುಮಾರು 20 ಅಡಿ ದೂರ ನೆಲಕ್ಕೆ ತೆರೆಯುತ್ತಲೇ ಸಾಗಿದ ಪರಿಣಾಮ, ಪೆಟ್ರೋಲ್‌ ಟ್ಯಾಂಕ್‌ ಲೀಕ್‌ ಅಗಿ ಬೆಂಕಿ ಹೊತ್ತಿ ಕೊಂಡಿದೆ. ಬೈಕ್‌ಗೆ ಹೊತ್ತಿಕೊಂಡ ಬೆಂಕಿ, ಲಾರಿಗೆ ಅವರಿಸಿಕೊಂಡು, ಲಾರಿ ಕೂಡ ಲಾರಿ ಸುಟ್ಟು ಕರಕಲಾಗಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಹಾಗೂ ನಿರ್ವಾಹಕ ಲಾರಿಯಿಂದ ಇಳಿದು ಪ್ರಾಣಪಾಯದಿಂದ ಪಾರಗಿದ್ದಾರೆ. ಲಾರಿಯಲ್ಲಿದ್ದ ಸಿಲಿಂಡರ್‌ಗಳು ಖಾಲಿಯಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next