Advertisement
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಹಾಜಿ ಸಾಹೇಬ್ ಪಟೇಲ್ ಚಾರಿಟೇಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 4ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
ಮಾತನಾಡಿ, ಪಪ್ಪು ಪಟೇಲ್ ಮತ್ತು ಕುಟುಂಬಸ್ಥರು ಹಾಗೂ ತಾಲೂಕಿನ ಸಮಸ್ತ ಮುಸಲ್ಮಾನ್ ಬಾಂಧವರು ಎಲ್ಲ ಧರ್ಮಿಯರೊಂದಿಗೆ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಯಾವುದೇ ಕೋಮು ದ್ವೇಷಗಳಿಲ್ಲದ ನಮ್ಮ ತಾಲೂಕಿನಲ್ಲಿ ಸಹೋದರತೆ, ಪ್ರೀತಿಗೆ ಕೊರತೆ ಇಲ್ಲ.
Advertisement
ಇಂತಹ ಸೌಹಾರ್ದದ ಊರಲ್ಲಿ ಪಟೇಲ್ ಕುಟುಂಬಸ್ಥರು ಬಡವರ ಮಕ್ಕಳ ಮದುವೆ ಮಾಡಿಸಿ ತಮ್ಮ ಮಕ್ಕಳ ಮದುವೆ ಮಾಡಿದಷ್ಟು ಸಂಭ್ರಮಿಸುತ್ತಿರುವುದು ನೋಡಿದರೆ ನಿಜವಾಗಲೂ ಅವರ ಸಮಾಜಮುಖೀ ಪ್ರೀತಿ ಎಂಥದ್ದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸಾಮೂಹಿಕ ವಿವಾಹದ ರೂವಾರಿ ಅಫತಾಬ್ ಪಟೇಲ್(ಪಪ್ಪು) ಪಟೇಲ್, ನಮ್ಮ ತಂದೆ, ತಾಯಿಯರ ಹಾಗೂ ಅಲ್ಲಾನ ಆಶೀರ್ವಾದದಿಂದ ನಮ್ಮ ಕೈಲಾದಷ್ಟು ಮಟ್ಟಿಗೆ ಬಡವರಿಗೆ ಸಹಾಯ ಮಾಡುತ್ತಿದ್ದೇವೆ. ತಾಲೂಕಿನ ಬಡ ಮುಸ್ಲಿಂ ಪಾಲಕರ ಮಕ್ಕಳ ಮದುವೆ ಮಾಡುವ ಮೂಲಕ ಅವರ ಕುಟುಂಬದ ಬಹು ದೊಡ್ಡ ಭಾರ ಇಳಿಸುವ ಕೆಲಸ ಮಾಡುತ್ತಿದ್ದೇವೆ.
ಯಾವುದೇ ಸ್ವಾರ್ಥ ಬಯಸದೇ ಮಾಡುವ ಪರೋಪಕಾರವನ್ನು ದೇವರು ಮೆಚ್ಚಿದರೆ ಸಾಕು. ಇಂತಹ ವೈಭವದ ಕಾರ್ಯ ಮಾಡಲು ಜನರ ಪ್ರೀತಿಯೇ ಕಾರಣ ಎಂದು ಹೇಳಿದರು.
ರಜಾಕ್ ಪಟೇಲ್, ಜಿಪಂ ಮಾಜಿ ಅಧ್ಯಕ್ಷ ನೀತಿನ್ ಗುತ್ತೇದಾರ, ಜಿಪಂ ಮಾಜಿ ಸದಸ್ಯ ಮತಿನ್ ಪಟೇಲ್, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮೇಲ್ವಿಚಾರಕಿ ನಿಂಗಮ್ಮ ಬಡದಾಳ, ಮಲ್ಲಪ್ಪ ಗುಣಾರಿ, ಮಹಾಂತೇಶ ಪಾಟೀಲ, ಚಿಂಟು ಪಟೇಲ್, ಮದನಬಾಯಿ ಶೇಟ್ ಮುಂಬೈ, ಶರಣು ಶೆಟ್ಟಿ, ಸಂತೋಷ ದಾಮಾ, ದಯಾನಂದ ದೊಡಮನಿ, ಎಸ್.ವೈ.ಪಾಟೀಲ, ಸಿದ್ದಯ್ಯಸ್ವಾಮಿ, ಅರುಣಕುಮಾರ ಪಾಟೀಲ ಗೊಬ್ಬೂರ, ನಾಗೇಶ ಕೊಳ್ಳಿ, ಮಹಾದೇವಪ್ಪ ಕರೂಟಿ, ಜಗನ್ನಾಥ ಶೇಗಜಿ ಇದ್ದರು.