Advertisement

Missing: ಗೃಹಲಕ್ಷ್ಮಿ ಹಣ ತೆಗೆಯಲು ಹೋಗಿದ್ದ ಮಹಿಳೆ ಕಾಣೆ!

03:37 PM Dec 15, 2023 | Kavyashree |

ತೀರ್ಥಹಳ್ಳಿ: ಗೃಹಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ಮನೆಯಿಂದ ಹೋದ ಮಹಿಳೆಯೊಬ್ಬಳು ಕಾಣೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ನಡೆದಿದೆ.

Advertisement

ರಂಜದಕಟ್ಟೆಯ ಮುಳುಬಾಗಿಲು ಗ್ರಾಮದ ಪಾರ್ವತಿ (60) ಕಾಣೆಯಾದ ಮಹಿಳೆ.

ಪಾರ್ವತಿ ಎಂಬವರು ಮಾನಸಿಕ ಅಸ್ವಸ್ಥೆ ಹಾಗೂ ಅಂಗವಿಕಲೆಯಾಗಿದ್ದು, ಕಳೆದ ಮಂಗಳವಾರ ಮನೆಯಿಂದ ನಡೆದುಕೊಂಡು ಹೋದವರು ಕಾಣೆಯಾಗಿದ್ದಾರೆ.

ಈಗಾಗಲೇ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದ್ದಾರೆ. ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ ಬಳಿಕ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರು ಕಂಡು ಬಂದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next