Advertisement

ಗೆಲುವು ನಿಶ್ಚಿತ: ಶೆಟ್ಟರ ವಿಶ್ವಾಸ

04:19 PM May 10, 2018 | Team Udayavani |

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಇಲ್ಲಿನ 45 ನೇ ವಾರ್ಡಿನಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನದಲ್ಲಿ ನೀರು, ರಸ್ತೆ, ಯುಜಿಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕೊಡುಗೆ ನೀಡಿದ್ದೇನೆ. ಹೀಗಾಗಿ ಕ್ಷೇತ್ರದ ಜನತೆ ಈ ಭಾರಿ ದಾಖಲೆ ಮತಗಳ ಅಂತರದಿಂದ ಗೆಲುವು ನೀಡಲಿದ್ದಾರೆ ಎಂದರು.

Advertisement

ಮುಖಂಡರಾದ ಶಿವು ಹಿರೇಕೆರೂರು, ದೇವೆಂದ್ರ ಹರಿವಾಣ, ಪ್ರಭು ಹಿರೇಕೆರೂರು, ಸಂಬಾಜಿ ದಳವಿ, ದಿನೇಶ ಪಲ್ಟಣಕರ, ರೋಹಿತ ಹಿರೇಕೆರೂರು, ರಿತೇಶ ಎಚ್‌., ಯಲ್ಲಪ್ಪ ಹೆಬಸೂರು, ಶೈಲೇಶ ಹರಿವಾಣ, ಮಾರುತಿ ಹಾಲಹರವಿ, ಆನಂದ ಹಳೇಮನಿ, ಸಂತೋಷ ಕೋದಾನಪುರ, ಹನುಮಂತಪ್ಪ ವಡ್ಡರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next