Advertisement

Kidnap Case: ಪತಿ ಬಳಿ ಇದ ಮಗನನ್ನು ಅಪಹರಿಸಿದ ಪತ್ನಿ!

01:13 PM Aug 04, 2024 | Team Udayavani |

ಕೆ.ಆರ್‌.ಪುರ: ಗಂಡನ ಮೇಲಿನ ಸಿಟ್ಟಿನಿಂದ ತಾಯಿಯೇ ಸ್ವಂತ ಮಗನನ್ನು ಸ್ನೇಹಿತನೊಂದಿಗೆ ಅಪಹರಿಸಿಕೊಂಡು ಹೋಗಿರುವ ಘಟನೆ ಕೆ.ಆರ್‌. ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೋಡಿಗೆಹಳ್ಳಿಯ ಕಾಸಾ ಗ್ರಾಂಡ್‌ ಅಪಾರ್ಟ್‌ಮೆಂಟ್‌ ಬಳಿ ನಡೆದಿದೆ.

Advertisement

ವಿಹಾನ್‌(6) ಅಪಹರಣಕ್ಕೆ ಒಳಗಾದ ಬಾಲಕ.

ಈತನ ತಂದೆ ಸಿದ್ಧಾರ್ಥ ಅವರು ಕೋರ್ಟ್‌ ವ್ಯಾಜ್ಯ ಸಂಬಂಧ ಚೆನ್ನೈಗೆ ತೆರಳಿದ್ದರು. ಹೀಗಾಗಿ ಸಿದ್ಧಾರ್ಥ್ ತಂದೆ ಸುಂದರ್‌ ರಾಜ್‌ ತನ್ನ ಮೊಮ್ಮಗ ವಿಹಾನ್‌ನನ್ನು ಎಂದಿನಂತೆ ಶಾಲೆಗೆ ಬಿಡಲು ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ಬಸ್‌ ಕಾಯುತ್ತಿದ್ದರು. ಮಗುವಿನ ತಾಯಿ ಅನುಪಮಾ ತನ್ನ ಗಂಡನ ಮೇಲಿನ ಸಿಟ್ಟಿನಿಂದ ಬೆಳಗ್ಗೆ 8.30ಕ್ಕೆ ಸ್ನೇಹಿತ ನೀಲಕಂಠ ಜೊತೆಗೆ ಕಾರಿನಲ್ಲಿ ಬಂದು ಮಗನನ್ನು ತಾತ ಸುಂದರ್‌ ರಾಜ್‌ರಿಂದ ಕಸಿದುಕೊಂಡು ಅಪಹರಣ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇತ್ತ ಸೊಸೆ ಅನುಪಮಾ ಅಪರಿಚಿತರೊಂದಿಗೆ ಕಾರಿನಲ್ಲಿ ಬಂದು ತನ್ನ ಮೊಮ್ಮಗ ವಿಹಾನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಬಾಲಕ ವಿಹಾನ್‌ ತಾತ ಸುಂದರ್‌ ರಾಜ್‌ ಕೆಆರ್‌ ಪುರ ಪೊಲೀಸ್‌ ಠಾಣೆಯಲ್ಲಿ ಸೊಸೆ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಾಗಿದ್ದ ದಂಪತಿ: ಸಾಫ್ಟವೇರ್‌ ಉದ್ಯೋಗಿಯಾ ಗಿದ್ದ ಸಿದ್ಧಾರ್ಥ ಜೊತೆ ಅನುಪಮಾು 2014ರಲ್ಲಿ ವಿವಾಹವಾಗಿತ್ತು. ಬಳಿಕ ಇಬ್ಬರ ಮಧ್ಯೆ ಕೌಟುಂಬಿಕ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ 2016ರಲ್ಲಿ ದೂರಾಗಿದ್ದರು. ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾ ಲಯದಲ್ಲಿದೆ. 2022ರಲ್ಲಿ ಗಂಡ ಮತ್ತು ಮಗು ಬೇಡವೆಂದು ಕೆ.ಆರ್‌. ಪುರ ಠಾಣೆಯಲ್ಲಿ ನೀಡಿದ್ದು, ಚೆನ್ನೈ ವೆಲ್ಫೆàರ್‌ ಕಮಿಟಿ 6 ವರ್ಷದ ಮಗುವನ್ನು ಪತಿ ಸಿದ್ಧಾರ್ಥ ವಶಕ್ಕೆ ನೀಡಿ ಆದೇಶಿಸಿತ್ತು. ಸಿದ್ಧಾರ್ಥ ತನ್ನ ತಂದೆ ಮತ್ತು ಮಗ ವಿಹಾನ್‌ ನೊಂದಿಗೆ ಬೆಂಗಳೂರಿ ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ವಿಹಾನ್‌ ನನ್ನು ತಾಯಿ ಅನುಪಮಾ ಚೆನ್ನೈಗೆ ಕರೆದುಕೊಂಡು ಹೋಗಿರುವ ಸಾಧ್ಯತೆ ಇದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next