Advertisement

KRS: 14 ಅಡಿ ಕುಸಿದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ

12:13 AM Sep 03, 2023 | Team Udayavani |

ಮಂಡ್ಯ: ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿರುವ ಪರಿಣಾಮ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 99.70 ಅಡಿಗೆ ಇಳಿದಿದೆ. ಅಲ್ಲದೆ ಇನ್ನೂ ನೀರು ಹರಿಸುತ್ತಿರು ವುದರಿಂದ ಮತ್ತಷ್ಟು ಕಡಿಮೆಯಾಗುವ ಭೀತಿ ತಲೆದೋರಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ತಲೆದೋರಿದೆ.

Advertisement

ಶನಿವಾರ ರಾತ್ರಿ 8 ಗಂಟೆಯವರೆಗಿನ ಮಾಹಿತಿ ಯಂತೆ, ನದಿ ಹಾಗೂ ನಾಲೆಗೆ 6,218 ಕ್ಯುಸೆಕ್‌ ನೀರಿನ ಹೊರಹರಿವು ಹಾಗೂ ಅಣೆಕಟ್ಟೆಗೆ 3,421 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಕಳೆದ ಜು. 3ರಂದು 78.30 ಅಡಿ ಇದ್ದ ನೀರಿನ ಮಟ್ಟ ಕೊಡಗಿನಲ್ಲಿ ಉತ್ತಮ ಮಳೆಯಾಗಿ 113 ಅಡಿಗಳಿಗೆ ಅಂದರೆ 35 ಅಡಿಗಳಷ್ಟು ಏರಿಕೆ ಕಂಡಿತ್ತು. ಬಳಿಕ ತಮಿಳು ನಾಡಿಗೆ ಹೆಚ್ಚು ನೀರುಹರಿಸಿದ ಪರಿಣಾಮ ವಾಗಿ ನೀರಿನ ಮಟ್ಟ 14 ಅಡಿಗಳಷ್ಟು ಕುಸಿದಿದೆ. ಕಳೆದ ವರ್ಷ ಇದೇ ದಿನ 124.56 ಅಡಿ ನೀರಿನ ಮಟ್ಟ, 26,814 ಕ್ಯುಸೆಕ್‌ ಒಳಹರಿವು ಹಾಗೂ 18,529 ಕ್ಯುಸೆಕ್‌ ಹೊರಹರಿವು ದಾಖ ಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next