Advertisement
6 ಗ್ರಾಮಗಳುಮಾಣಿ, ಪೆರಾಜೆ, ಅನಂ ತಾಡಿ, ನೆಟ್ಲಮುಟ್ನೂರು, ಕಡೇ ಶ್ವಾಲ್ಯ, ಬರಿಮಾರು ಗ್ರಾಮ ಗಳು, 51 ಜನವಸತಿ ಪ್ರದೇಶ, 25,215 ಜನಸಂಖ್ಯೆಗೆ ಪೂರಕ ವಾಗಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಕಡೇಶ್ವಾಲ್ಯ ಗ್ರಾಮದ ಕಾಗೆಕಾನ ಪ್ರದೇಶದ ನದಿ ಆಳದ ಅಂಚಿನಲ್ಲಿ ನೀರೆತ್ತುವ ಸ್ಥಾವರ ನಿರ್ಮಿಸಲಾಗಿದೆ.
ಕಡೇಶ್ವಾಲ್ಯ ಗ್ರಾಮ ಖಂಡಿಗ ವಲಯದ 17 ಜನವಸತಿ ಪ್ರದೇಶದ ಜನಸಂಖ್ಯೆ -5,030
ಬರಿಮಾರು, ಮಾಣಿ, ಪೆರಾಜೆ ಗ್ರಾಮಗಳ ಬುರ್ದು ವಲಯದ 12 ಜನವಸತಿ ಪ್ರದೇಶದ ಜನಸಂಖ್ಯೆ-5,418 ಅನಂತಾಡಿ, ನೆಟ್ಲಮುಟ್ನೂರು, ಮಾಣಿ, ಪೆರಾಜೆ ಗ್ರಾಮಗಳ ಕೊಂಬಿಲಾ ವಲಯದ 22 ಜನವಸತಿ ಪ್ರದೇಶದ ಜನಸಂಖ್ಯೆ -10,326 ಹೆಚ್ಚುವರಿ ಸೇರ್ಪಡೆ ಜನಸಂಖ್ಯೆ-4,441
Related Articles
ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಿರೀಕ್ಷೆಯಂತೆ ಮುಕ್ತಾಯ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ನೀರು ಹರಿಸುವ ಕೆಲಸ ನಡೆದಿದೆ. ಕೆಲವು ಪೈಪ್ಲೈನ್ ಸಹಿತ ಸಣ್ಣಪುಟ್ಟ ನಿರ್ವಹಣೆ ಕೆಲಸಗಳನ್ನು ಪೂರ್ತಿ ಮಾಡಲಾಗುವುದು. ಒಟ್ಟು ಕೆಲಸದ ಮುಂದಿನ ಐದು ವರ್ಷಗಳ ನಿರ್ವಹಣೆಯನ್ನು ಇದೇ ಗುತ್ತಿಗೆದಾರರು ಮಾಡಲಿದ್ದಾರೆ.
- ಮಹೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಬಂಟ್ವಾಳ
Advertisement
ಮಂಜೂರಾತಿ ಸಂತೃಪ್ತಿ ತಂದಿದೆಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ 2014-15ರ ಅವಧಿಯಲ್ಲಿ ಪ್ರಸ್ತಾವನೆಯಾಗಿ 2016-17ರ ಸಾಲಿನಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಅದರಲ್ಲಿ ಸಂಗಬೆಟ್ಟು, ಕರೋಪಾಡಿ ಅನುಷ್ಠಾನ ಆಗಿದೆ. ಮಾಣಿ ಸಿದ್ಧವಾಗಿದೆ. ನರಿಕೊಂಬು, ಸರಪಾಡಿ ಪ್ರಗತಿಪಥದಲ್ಲಿದೆ. ರಾಜ್ಯದಲ್ಲಿಯೇ ಪ್ರಥಮ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ದೊರೆತಿರುವುದು ಸಂತೃಪ್ತಿ ತಂದಿದೆ.
- ಬಿ. ರಮಾನಾಥ ರೈ, ಮಾಜಿ ಸಚಿವರು