Advertisement

ಕಡೆಕಾರು, ಕುತ್ಪಾಡಿಯ ಗ್ರಾಮ ಲೆಕ್ಕಿಗ ಹೃದಯಾಘಾತದಿಂದ ನಿಧನ

11:20 AM Jun 10, 2020 | keerthan |

ಕಟಪಾಡಿ: ಕಡೆಕಾರು ಮತ್ತು ಕುತ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಲೆಕ್ಕಿಗನಾಗಿ ಕೆಲಸ ನಿರ್ವಹಿಸುತ್ತಿದ್ದ ಎಚ್ ಜಿ ಕೇಶವ ಅವರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.

Advertisement

ಇವರು ಹಾಸನ ಮೂಲದವರಾಗಿದ್ದು, ಜಿಲ್ಲೆಯಲ್ಲಿ ಕೆಲ ಸಮಯದಿಂದ ಕೆಲಸ ನಿರ್ವಹಿಸುತ್ತಿದ್ದರು.

ಕಡೆಕಾರು ಮತ್ತು ಕುತ್ಪಾಡಿ ಗ್ರಾಮಗಳಲ್ಲಿ ಪ್ರಧಾನ ಗ್ರಾಮ ಲೆಕ್ಕಿಗನಾಗಿದ್ದು, ಮಣಿಪುರ ಮತ್ತು ಮರ್ಣೆ ಗ್ರಾಮ ಗಳಲ್ಲಿ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಮಂಗಳವಾರ ರಾತ್ರಿ 10.45ರ ಸುಮಾರಿಗೆ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆಯಿಂದ ಮೃತರ ಅಂತಿಮ ದರ್ಶನಕ್ಕೆ ಉಡುಪಿ ತಾಲೂಕು ಕಚೇರಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಂತ್ಯಕ್ರಿಯೆ ಹುಟ್ಟೂರು ಹಾಸನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next