Advertisement

ವಿಡಿಯೋ ಬಿಡುಗಡೆ ಬ್ರಹ್ಮ ಯಾರೆಂದು ಗೊತ್ತಿಲ್ಲ

10:29 PM Nov 02, 2019 | Lakshmi GovindaRaju |

ಹುಬ್ಬಳ್ಳಿ: ಬಿಜೆಪಿ ಪ್ರಮುಖರ ಸಭೆಯಲ್ಲಿ ಯಡಿಯೂರಪ್ಪ ಅವರ ಆಡಿಯೋ, ವಿಡಿಯೋ ಬಿಡುಗಡೆಯ ಬ್ರಹ್ಮ ಯಾರು? ಅದನ್ನು ರೆಕಾರ್ಡ್‌ ಮಾಡಿದ್ದು ಯಾರು? ಅನ್ನುವ ಕುರಿತು ದೃಢಪಟ್ಟಿಲ್ಲ. ಅಲ್ಲಿನ ಚರ್ಚೆಯ ವಿಷಯಗಳನ್ನು ಬಹಿರಂಗ ಮಾಡಲು ನಾನು ಬಯಸಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಕೋರ್‌ ಕಮಿಟಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಅದನ್ನು ಯಾರು ರೆಕಾರ್ಡ್‌ ಮಾಡಿದ್ದಾರೆಂದು ಬಹಿರಂಗಪಡಿಸಲಿ. ಸದ್ಯಕ್ಕೆ ಸರ್ಕಾರ ಬೀಳಿಸಲು ಹೋಗಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಗೆ ಬೆಂಬಲ ಕೊಡುವುದಾಗಿ ಜೆಡಿಎಸ್‌ನಿಂದ ಅಧಿಕೃತವಾಗಿ ಯಾರೂ ಹೇಳಿಲ್ಲ.

ಕುಮಾರಸ್ವಾಮಿ ಹೇಳಿಕೆಯನ್ನು ಬೆಂಬಲ ಎಂದು ನಾನು ಅಂದುಕೊಳ್ಳಲ್ಲ. ಇದಕ್ಕೆಲ್ಲ ಹಸ್ತಲಾಘವ ಮಾಡಿ ರುವ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರ ಸ್ವಾಮಿ ಉತ್ತರಿಸಬೇಕು. ಈ ಕುರಿತು ದೇವೇಗೌಡರಿಂದ ಅಧಿಕೃತ ಹೇಳಿಕೆ ಬರಲಿ. ದೇವೇಗೌಡ ರಿಂದ ಹೇಳಿಕೆ ಬಂದರೆ ಅದಕ್ಕೊಂದು ಗಾಂಭೀರ್ಯತೆ ಇರುತ್ತದೆ. ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ಕೊಟ್ಟರೆ ನಾವು ಮೂರ್ಖರಾಗಬೇಕಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next