Advertisement

ಕಾಂಗ್ರೆಸ್‌ ಗೆಲುವು: ಕಾರ್ಯಕರ್ತರ ಸಂಭ್ರಮ

03:40 PM Apr 14, 2017 | Team Udayavani |

ಜೇವರ್ಗಿ: ಗುಂಡ್ಲುಪೇಟೆ ಮತ್ತು  ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಿಂದ ಅಖಂಡೇಶ್ವರ ವೃತ್ತದವರೆಗೆ ರ್ಯಾಲಿ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.  

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರಾಜಶೇಖರ ಸೀರಿ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಟೆ ಕಣವಾಗಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 4 ವರ್ಷದಲ್ಲಿ ಉತ್ತಮ ಆಡಳಿತ ನೀಡಿದ ಪರಿಣಾಮ ಎರಡು ಕ್ಷೇತ್ರದ ಜನ ಕಾಂಗ್ರೆಸ್‌ ಬೆಂಬಲಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಖಚಿತ. ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಬಾರಿ ಅಂತರದಿಂದ ಗೆದ್ದಿರುವುದು ಬಿಜೆಪಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಹೇಳಿದರು.  ಶರಣು ಗುತ್ತೇದಾರ, ನೀಲಕಂಠ ಅವಂಟಿ, ಸುದರ್ಶನ ಆಲಬಾಳ, ರವಿ ಕೋಳಕೂರ, ಪ್ರಕಾಶ ಪುಲಾರೆ, ಮಲ್ಲು ಬಳುಂಡಗಿ,  ಭಾವುದ್ದೀನ್‌, ಬಸವರಾಜ ಲಾಡಿ,

ಸುರೇಶ ಬಿ.ಟಿ., ಗುಂಡು ಗುತ್ತೇದಾರ, ಶ್ರೀಮಂತ ಧನಕರ, ಮಹಿಬೂಬ್‌ ಚನ್ನೂರ, ಮರೆಪ್ಪ ಸರಡಗಿ, ಮಹಾನಂದಪ್ಪ ಹರವಾಳ, ಚಂದ್ರು ನೇರಡಗಿ, ರಾಯಪ್ಪ ಬಾರಿಗಿಡ, ಲಕ್ಷಣ ಪೂಜಾರಿ, ಭೀಮರಾಯ ಹಲ್ಲಹಂಗರಾಗಾ, ಮಲ್ಲಿಕಾರ್ಜುನ ಆಂದೋಲಾ, ಕಾಂತಪ್ಪ ಪೂಜಾರಿ, ನಾಗರೆಡ್ಡಿ ನೇರಡಗಿ, ಸುಭಾಷ ಚನ್ನೂರ, ನಾಗರಾಜ ಆಲಗೂರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next