Advertisement

ಚೇಳೂರು ತಾಲೂಕು ಹೋರಾಟಕ್ಕೆ ಜಯ

06:57 AM Feb 09, 2019 | |

ಚಿಕ್ಕಬಳ್ಳಾಪುರ: ಸಿಎಂ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ತಮ್ಮ ಎರಡನೇ ಬಜೆಟ್‌ನಲ್ಲಿ ಜಿಲ್ಲೆಯ ಅತಿ ಹಿಂದು ಳಿದ ತಾಲೂಕಾದ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ತಾಲೂಕು ಕೇಂದ್ರ ವಾಗಿ ಘೋಷಣೆ ಮಾಡಿದ್ದು, ಆ ಭಾಗದ ಜನರ 25 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ.

Advertisement

ಚೇಳೂರು ಹೋಬಳಿ ನೆರೆಯ ಆಂಧ್ರಕ್ಕೆ 10 ಕಿ.ಮೀನಷ್ಟು ದೂರ ದಲ್ಲಿದ್ದು, ಅತ್ತ ಬಾಗೇಪಲ್ಲಿ, ಇತ್ತ ಚಿಂತಾಮಣಿ ತಾಲೂಕಿಗೂ ಹತ್ತಿರ ಇಲ್ಲದೇ ಸುಮಾರು 40 ರಿಂದ 50 ಕೀ.ಮಿ. ಅಂತರದಲ್ಲಿದೆ. ಇದರಿಂದ ಚೇಳೂರು ಹೋಬಳಿ ಸಾಕಷ್ಟು ಹಿಂದುಳಿದಂತಾಗಿದ್ದು, 25 ವರ್ಷ ಗಳಿಂದಲೂ ಚೇಳೂರು ಹೋಬಳಿ ಪ್ರತ್ಯೇಕ ತಾಲೂಕು ಆಗ ಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು.

ವಾಣಿಜ್ಯ ಕೇಂದ್ರ ವಾಗಿ ಸಾಕಷ್ಟು ಗಮನ ಸೆಳೆದಿರುವ ಚೇಳೂರು, 50 ಸಾವಿರ ಜನಸಂಖ್ಯೆ ಇದೆ. ಇತ್ತೀ ಚೆಗೆ ಬೆಂಗಳೂರಿನಲ್ಲಿ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿ ಸಿಎಂಗೆ ಮನವಿ ಸಲ್ಲಿಸಿದ್ದು, ಇದೀಗ 25 ವರ್ಷಗಳ ಹೋರಾ ಟಕ್ಕೆ ಜಯ ಸಿಕ್ಕಿ ಚೇಳೂರು ಹೋಬಳಿ ಕೇಂದ್ರ ತಾಲೂಕಾಗಿದೆ. ಆದರೆ ಗೌರಿಬಿದನೂರು ತಾಲೂ ಕಿನ ಮಂಚೇನಹಳ್ಳಿ ಹಾಗೂ ಶಿಡ್ಲ ಘಟ್ಟ ತಾಲೂಕಿನ ಸಾದಲಿಯನ್ನು ತಾಲೂಕಾಗಿ ಘೋಷಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next