Advertisement

ರಸ್ತೆ ಮಣ್ಣು ತೆರವುಗೊಳಿಸಲು ಆಗ್ರಹ

02:51 PM Aug 16, 2019 | Team Udayavani |

ಬದಿಯಡ್ಕ: ಚೆರ್ಕಳ- ಕಲ್ಲಡ್ಕ ಮಾರ್ಗದ ಕರಿಂಬಿಲ ರಸ್ತೆಗೆ ಬಿದ್ದಿರುವ ಮಣ್ಣನ್ನು ಶೀಘ್ರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಬದಿಯಡ್ಕ ಪಂಚಾಯತ್‌ನ ಬಿಜೆಪಿ ಪ್ರತಿನಿಧಿಗಳ ನೇತೃತ್ವದಲ್ಲಿ ಲೋಕೋಪಯೋಗಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಜಿಲ್ಲಾ ಪಂಚಾಯತು ಸದಸ್ಯರಾದ ನ್ಯಾಯವಾದಿ ಕೆ.ಶ್ರೀಕಾಂತ್‌ ಮುಖ್ಯಸ್ಥಿಕೆಯಲ್ಲಿ ಆರಂಭವಾದ ಜನಪ್ರತಿನಿಧಿಗಳ ಮೆರವಣಿಗೆ ಕೆಡೆಂಜಿ ಜಂಕ್ಷನ್‌ನಿಂದ ಪ್ರಾರಂಭಿಸಿ ಲೋಕೋಪಯೋಗಿ ಕಚೇರಿಯವರೆಗೆ ನಡೆಯಿತು. ಜನಪ್ರತಿನಿಧಿಗಳಾದ ಅವಿನಾಶ್‌ ವಿ.ರೈ., ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ಡಿ.ಶಂಕರ, ಪುಷ್ಪಾ ಭಾಸ್ಕರನ್‌, ನೇತಾರರಾದ ಸುಧಾಮ ಗೋಸಾಡ, ಸುಕುಮಾರ ಕುದ್ರೆಪ್ಪಾಡಿ, ಹರೀಶ್‌ ಗೋಸಾಡ, ಪ್ರೇಮ ಕುಮಾರಿ ಮೊದಲಾದವರು ಉಪಸ್ಥಿತರಿದರು.

Advertisement

Udayavani is now on Telegram. Click here to join our channel and stay updated with the latest news.

Next