Advertisement

ಬಂಡೆದ್ದಿದ್ದ ಇಬ್ಬರಿಗೆ ಠೇವಣಿಯೂ ಸಿಗಲಿಲ್ಲ

11:48 PM Jun 04, 2024 | Team Udayavani |

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವೆದ್ದು ಕಣಕ್ಕಿಳಿದಿದ್ದ ಇಬ್ಬರೂ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಪುತ್ರ ಕಾಂತೇಶ್‌ಗೆ ದಾವಣಗೆರೆ ಅಥವಾ ಹಾವೇರಿಯಿಂದ ಟಿಕೆಟ್‌ ಬೇಕೆಂದು ಪಟ್ಟು ಹಿಡಿದಿದ್ದ ಈಶ್ವರಪ್ಪ, ಮಗನಿಗೆ ಟಿಕೆಟ್‌ ಕೊಡಲಿಲ್ಲವೆಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದರು.

Advertisement

ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ 30,050 ಮತಗಳನ್ನಷ್ಟೇ ಪಡೆದು ಠೇವಣಿ ಸಹ ಕಳೆದುಕೊಂಡಿದ್ದಾರೆ. ಇತ್ತ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಬಂಡೆದ್ದು ಕಣಕ್ಕಿಳಿದಿದ್ದ ವಿನಯ್‌ಕುಮಾರ್‌ಗೂ ಸೋಲಿನ ಕಹಿ ಉಂಟಾಗಿದ್ದು, ಕೇವಲ 42,907 ಮತಗಳನ್ನು ಪಡೆದು ಪ್ರಭಾ ಮಲ್ಲಿಕಾರ್ಜುನ ಎದುರು 5,90,152 ಮತಗಳ ಅಂತರ ದಿಂದ ಸೋತು ಠೇವಣಿ ಕಳೆದುಕೊಂಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next