Advertisement

ಸಾರಿಗೆ ಸಂಸ್ಥೆ ಉಳಿವಿಗೆ ಸಹಕಾರ ಅಗತ್ಯ

11:00 AM Mar 05, 2018 | |

ಅಫಜಲಪುರ: ಸರ್ಕಾರಿ ಸಾರಿಗೆ ಸಂಸ್ಥೆ ಉಳಿಯಬೇಕಾದರೆ ಜನರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ತಾಲೂಕಿನ ಪ್ರಮುಖ ಕೇಂದ್ರವಾದ ಚವಡಾಪುರದಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿ 1.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್‌ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಅಫಜಲಪುರ ಬಸ್‌ ಘಟಕ ಅತಿ ಹೆಚ್ಚು ಆದಾಯ ತಂದು ಕೊಡುತ್ತಿದೆ. ವಾರ್ಷಿಕ ಅಂದಾಜು 2 ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ ಬಸ್‌ ಘಟಕಕ್ಕೆ ವಿಶೇಷ ಮಾನ್ಯತೆ ಇದೆ. ಬರುವ ದಿನಗಳಲ್ಲಿ ತಾಲೂಕಿನ ಪ್ರಮುಖ ಕೇಂದ್ರಗಳಾದ ಮಾಶಾಳ ಮತ್ತು ಕರ್ಜಗಿ ಬಸ್‌ ನಿಲ್ದಾಣ ಮೇಲ್ದರ್ಜೆಗೇರಿಸಲಾಗುವುದು. ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಬಗ್ಗೆ ಚಿಂತಿಸಲಾಗಿತ್ತು ಎಂದ ಅವರು, ಪ್ರಯಾಣಿಕರು ನೂತನ ಬಸ್‌ ನಿಲ್ದಾಣ ಸರ್ಕಾರದ್ದು ಎಂದು ಭಾವಿಸಬಾರದು. ಜನರ ತೆರಿಗೆ ಹಣದಿಂದ ನಿಲ್ದಾಣ ನಿರ್ಮಿಸಲಾಗಿದೆ. ಹಿಗಾಗಿ ಎಲ್ಲರೂ ಸ್ವತ್ಛತೆ ಕಾಪಾಡಬೇಕು. ಅಫಜಲಪುರ ಬಸ್‌ ಘಟಕಕ್ಕೆ 5 ಹೊಸ ಬಸ್‌ ನೀಡಲಾಗಿದೆ ಎಂದು ಹೇಳಿದರು.

ಅಫಜಲಪುರ ತಾಲೂಕು ಬಹಳ ದೊಡ್ಡ ತಾಲೂಕು ಆಗಿದೆ. ನಮ್ಮ ತಾಲೂಕಿನಲ್ಲಿ ಹೊಸ ತಾಲೂಕು ಆಗುವಲ್ಲಿ ಚವಡಾಪುರ ಕೂಡ ಒಂದಾಗಿದೆ. ಬರುವ ದಿನಗಳಲ್ಲಿ ಚವಡಾಪುರ ತಾಲೂಕು ಕೇಂದ್ರವಾಗಿಸಲಾಗುತ್ತದೆ ಎಂದು ಹೇಳಿದರು. ವಿಭಾಗಿಯ ನಿಯಂತ್ರಣಾಧಿಕಾರಿ ಎ.ಎಚ್‌. ನಾಗೇಶ ಮಾತನಾಡಿ, ಅಫಜಲಪುರ ಘಟಕದಿಂದ ನಿತ್ಯ 216 ಬಸ್‌ ಗಳು ಸಂಚರಿಸುತ್ತಿವೆ. ಸರಾಸರಿ 60 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಪಾರ್ವತಿ ರಾಠೊಡ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಜಿಪಂ ಉಪಾದ್ಯಕ್ಷೆ ಶೋಭಾ ಶಿರಸಗಿ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಪ್ರಮುಖರಾದ ಮಹಾದೇವ ಗುತ್ತೇದಾರ, ಮಲ್ಲಿನಾಥ ಪಾಟೀಲ, ಶಿವಪುತ್ರಪ್ಪ ಕರೂರ, ಬಿ.ವೈ. ಪಾಟೀಲ, ಪಾಶಾ ಮಣೂರ, ಬಸವರಾಜ ಸಪ್ಪನಗೋಳ, ಸಾವಿರಪ್ಪ ಪೂಜಾರಿ, ಸುಭಾಷ ರಾಠೊಡ, ಮುಖ್ಯ ಅಭಿಯಂತರ ಪಿ. ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಮೈಬೂಬಸಾಬ್‌, ಘಟಕ ವ್ಯವಸ್ಥಾಪಕ ಗೋಪಾಲ ಕುಲಕರ್ಣಿ, ಡಿಟಿಒ ಶ್ರೀಧರ ಕುಲಕರ್ಣಿ, ಡಿಎಂಇ ಕಮ್ಮೂರ, ಎಇಇ ಎಂ.ಡಿ. ಸುಂಕದ, ಗುತ್ತಿಗೆದಾರ ಯಲ್ಲಪ್ಪಗೌಡ ಕುಲಕರ್ಣಿ, ಪಿ ಸಂಜೀವರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next