Advertisement

Save; ತುರ್ತು ಬ್ರೇಕ್‌ ಒತ್ತಿ 10 ಸಿಂಹಗಳ ಪ್ರಾಣ ಉಳಿಸಿದ ರೈಲು ಚಾಲಕ

01:30 AM Jun 18, 2024 | Team Udayavani |

ಭಾವನಗರ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಪಿಪವಾವ್‌ ಪೋರ್ಟ್‌ ಬಳಿ ಗೂಡ್ಸ್‌ ರೈಲಿನ ಚಾಲಕ ುರ್ತು ಬ್ರೇಕ್‌ ಒತ್ತಿ ಹಳಿಯ ಮೇಲೆ ಕುಳಿತಿದ್ದ 10 ಸಿಂಹಗಳ ಜೀವ ಉಳಿಸಿದ್ದಾರೆ. ಅವರನ್ನು ಮುಕೇಶ್‌ ಕುಮಾರ್‌ ಮೀನಾ ಎನ್ನಲಾಗಿದ್ದು, ಮುಕೇಶ್‌ 10 ಸಿಂಹಗಳು ಹಳಿಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿ ತತ್‌ಕ್ಷಣವೇ ತುರ್ತುಬ್ರೇಕ್‌ ಅನ್ನು ಒತ್ತಿದ್ದಾರೆ. ಬಳಿಕ ಸಿಂಹಗಳು ಹಳಿಯಿಂದ ಎದ್ದು ಹೋಗುವವರೆಗೆ ಕಾದು ಅನಂತರ ಹೊರಟಿದ್ದಾರೆ. ಮುಕೇಶ್‌ ಅವರ ಈ ಕಾರ್ಯಕ್ಕೆ ರೈಲ್ವೇ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next