Advertisement

ಸಿದ್ದಾರ್ಥ ದುರಂತ ಅಂತ್ಯ; ತಾಯಿ, ಕುಟುಂಬಸ್ಥರ ಆಕ್ರಂದನ, ತಂದೆ ಕೋಮಾದಲ್ಲಿ

09:50 AM Aug 01, 2019 | Nagendra Trasi |

ಚಿಕ್ಕಮಗಳೂರು: ಸೋಮವಾರ ರಾತ್ರಿ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ನಾಡಿನ ಹೆರಾಂತ ಉದ್ಯಮಿ ಹಾಗೂ ಜಿಲ್ಲೆಯವರಾದ ಸಿದ್ದಾರ್ಥ ಅವರ ಶವಸಂಸ್ಕಾರ ಜಿಲ್ಲೆಯ ಚಟ್ಟನಹಳ್ಳಿಯಲ್ಲಿರುವ ಚೇತನಾಹಳ್ಳಿ ಎಸ್ಟೇಟ್ ನಲ್ಲಿ ಬುಧವಾರ ಸಂಜೆ 6.30ಕ್ಕೆ ನಡೆಯಲಿದೆ.

Advertisement

ಇದನ್ನೂ ಓದಿ: ಎಸ್.ಎಂ.ಕೆ. ಅಳಿಯ ಸಿದ್ದಾರ್ಥ ಮೃತದೇಹ ಪತ್ತೆ : ಊಹಾಪೋಹಕ್ಕೆ ತೆರೆ

“ಇನ್ನೊಂದೆಡೆ ಮುಂಜಾನೆ ಸಿದ್ದಾರ್ಥ ಸಾವಿನ ‌ಸುದ್ದಿ ತಿಳಿಯುತ್ತಿದ್ದಂತೆ, ಮೂಡಿಗೆರೆ ತಾಲುಕಿನ ಚಟ್ಟನಹಳ್ಳಿ ಗ್ರಾಮದಲ್ಲಿ ‌ಸೂತಕದ ಛಾಯೆ ಅವರಿಸಿದ್ದು, ಚೇತನಾ ಎಸ್ಟೇಟ್ ನಲ್ಲಿ ಸಿದ್ದಾರ್ಥ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಸಿದ್ದಾರ್ಥ ದುರಂತ ಅಂತ್ಯ; ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ 2ರಿಂದ 4.30ರವರೆಗೆ ಅಂತಿಮ ದರ್ಶನ

ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ಮೈಸೂರಿನ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದು, ಈ ನಿಟ್ಟಿನಲ್ಲಿ ಮಗನ ಸಾವಿನ ಸುದ್ದಿಯನ್ನು ಹೇಳಬೇಕೋ ಬೇಡವೋ ಎಂಬ ಬಗ್ಗೆ ಕುಟುಂಬ ವರ್ಗ ಗೊಂದಲಕ್ಕೊಳಗಾಗಿದೆ ಎಂದು ವರದಿ ವಿವರಿಸಿದೆ”.

Advertisement

ಇದನ್ನೂ ಓದಿ: ಕಿಂಗ್‌ ಇಲ್ಲದ ಕಾಫೀ ಡೇಯಲ್ಲಿ ಮೌನ

ಶವ ಸಂಸ್ಕಾರಕ್ಕೂ ಮುನ್ನ ಚಿಕ್ಕಮಗಳೂರು ನಗರದಲ್ಲಿರುವ ಎಬಿಸಿ ಕಾಫಿ ಗ್ಲೋಬಲ್ ಲಿ. ಕಂಪೆನಿ ಆವರಣದಲ್ಲಿ ಸಿದ್ದಾರ್ಥ ಅವರ ಪಾರ್ಥಿವ ಅಂತಿಮ ದರ್ಶನ ನಡೆಯಲಿದ್ದು, ಅಂತಿಮ ದರ್ಶನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಕಲ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: ಸಿದ್ಧಾರ್ಥ್ ವಿತ್‌ ಕೆಫೆ ಕಾಫಿ ಡೇ…

ಅಂತಿಮ ದರ್ಶನಕ್ಕೆ ನಾಡಿನ ಪ್ರಮುಖ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳೂ, ಸಿದ್ದಾರ್ಥ ಒಡೆತನದ ಸಂಸ್ಥೆಗಳ ಸಿಬ್ಬಂದಿ, ಕಾರ್ಮಿಕರು ಹಾಗೂ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುವ ಹಿನ್ನೆಯಲ್ಲಿ  ವ್ಯವಸ್ಥಿತ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಸಿದ್ದಾರ್ಥ ಅವರ ಸಾವಿನ‌ ಹಿನ್ನೆಲೆಯಲ್ಲಿ ನಗರದ ಎಬಿಸಿ ಕಂಪೆನಿ ಸಿಬ್ಬಂದಿ, ಕಾಫಿ ಡೇ, ಅಂಬರ್ ವ್ಯಾಲಿ, ಸೆರಾಯ್ ರೆಸಾರ್ಟ್, ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈಗಾಗಲೆ ಎಬಿಸಿ ಕಂಪೆನಿ‌ ಅವರಣದಲ್ಲಿ ಜಮಾಯಿಸಲಾರಂಭಿಸಿದ್ದಾರೆ.

ಇದನ್ನೂ ಓದಿ: ಕಾಫಿ ಡೇ ಶುರು ಮಾಡಿದ ಕಥೆ…

ಜಿಲ್ಲಾದ್ಯಂತ ಇರುವ ಸಿದ್ದಾರ್ಥ ಸಂಬಂಧಿಗಳು, ಕಾಫಿಬೆಳೆಗಾರರೂ ಅಂತಿಮ ದರ್ಶನ ಪಡೆಯಲು ದೌಡಾಯಿಸುತ್ತಿದ್ದಾರೆ. ಸ್ಥಳದಲ್ಲಿ ಬಾರಿ ವಾಹನಗಳು ಹಾಗೂ ಸಾರ್ವಜನಿಕರು ಜಮಾಯಿಸುತ್ತಿರುವುದರಿಂದ ಚಿಕ್ಕಮಗಳೂರು -ಮೂಡಿಗೆರೆ ಹೆದ್ದಾರಿಯಲ್ಲಿ ಬಾರಿ ವಾಹನ‌ದಟ್ಟಣೆ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಬ್ಯಾರಿಕೇಡ್ ಗಳ ಮೂಲಕ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಕಾಫಿಯ ಡೇ ಬದಲಿಸಿದ ಸಿದ್ಧಾರ್ಥ

ಎಬಿಸಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ದಾರಿ, ವ್ಯವಸ್ಥೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next