Advertisement

ಪೊಲೀಸರ ಮೊಬೈಲ್‌, ಹಣವನ್ನೇ ಕದ್ದ ಕಳ್ಳರು

11:20 PM Sep 14, 2019 | Lakshmi GovindaRaju |

ಶಿವಮೊಗ್ಗ: ಹಿಂದೂ ಮಹಾಸಭಾ ಗಣೇಶಮೂರ್ತಿ ರಾಜಬೀದಿ ಉತ್ಸವದ ಭದ್ರತೆಗೆ ಬಂದಿದ್ದ ಪೊಲೀಸರ ಮೊಬೈಲ್‌ ಹಾಗೂ ಹಣವನ್ನೇ ಕಳ್ಳರು ಲಪಟಾಯಿಸಿದ್ದಾರೆ. ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆಯ ಭದ್ರತೆಗೆ ಗುರುವಾರ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

ಈ ವೇಳೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಸಿಬ್ಬಂದಿಗೆ ಕಲ್ಯಾಣ ಮಂಟಪಗಳಲ್ಲಿ ಉಳಿಯಲು ವ್ಯವಸ್ಥೆ ಮಾಡ ಲಾಗಿತ್ತು. ಇದರಲ್ಲಿ ಸೌಭಾಗ್ಯ ಕಲ್ಯಾಣ ಮಂದಿರದಲ್ಲಿ ತಂಗಿದ್ದ 15 ಮಂದಿ ಪೇದೆಗಳ 15 ಮೊಬೈಲ್‌, 30 ಸಾವಿರ ರೂ.ಗಳನ್ನು ಕಳ್ಳರು ಲಪಟಾಯಿಸಿದ್ದಾರೆ. ಮೆರವಣಿಗೆ ಮುಗಿದ ನಂತರ ರಾತ್ರಿ ಗಾಢ ನಿದ್ದೆಯಲ್ಲಿದ್ದ ವೇಳೆ ಕಳ್ಳರು, ಕೃತ್ಯವೆಸಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next