Advertisement

ಪರಾರಿಯಾಗುವಾಗ ಬಾವಿಗೆ ಬಿದ್ದ ಕಳ್ಳ

05:43 PM Jul 28, 2021 | Team Udayavani |

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಮೊಬೈಲ್‌ ಕದ್ದು ಪರಾರಿಯಾಗುವ ವೇಳೆ ಕಳ್ಳನೊಬ್ಬ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ನಡೆಸಿದರೂ, ಮೃತ ದೇಹ ಪತ್ತೆಯಾಗಿಲ್ಲ. ಜು.28ರಂದು ಬೆಳಗ್ಗೆ ಶೋಧ ಕಾರ್ಯ ಮುಂದುವರಿಯಲಿದೆ.

Advertisement

ಸೋಮವಾರ ಸಂಜೆ 6:30ರ ಸುಮಾರಿಗೆ ಮೊಬೈಲ್‌ ಕದ್ದಿದ್ದ. ಆಗ ಕೆಲವರು ಹಿಡಿಯಲು ಯತ್ನಿಸಿದರು. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರಾಣಿ ಸಂಗ್ರಹಾಲಯ ಸಮೀಪದ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೋಮವಾರ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಬಾವಿಯಲ್ಲಿ ತುಂಬಾ ಕಸ ತುಂಬಿಕೊಂಡ ಕಾರಣ ಪತ್ತೆ ಹಚ್ಚಲು ಕಷ್ಟವಾಗಿತ್ತು. ಹೀಗಾಗಿ ಮಂಗಳವಾರ ಬೆಳಗ್ಗೆ ಮಹಾನಗರ ಪಾಲಿಕೆ ಮೂಲಕ ಬಾವಿಯಲ್ಲಿ ನೀರನ್ನು ಮೋಟರ್‌ ಹಚ್ಚಿ ಖಾಲಿ ಮಾಡಿಸುವ ಪ್ರಯತ್ನ ನಡೆಯಿತು.

ಬಾವಿಯಲ್ಲಿ ಸಂಪೂರ್ಣ ಕಸ ತುಂಬಿದ್ದರಿಂದ ಎಲ್ಲ ನೀರು ಹೊರ ಹಾಕಲು ಸಾಧ್ಯವಾಗಲಿಲ್ಲ. ಅಲ್ಲದೇ, ಮಂಗಳವಾರ ಸಂಜೆ ವೇಳೆಗಾದರೂ ಮೃತ ದೇಹ ನೀರಲ್ಲಿ ತೇಲಬೇಕಿತ್ತು. ಆದರೆ, ಕಸ ಮತ್ತು ಮಣ್ಣು ಇರುವುದಿಂದ ಸಿಲುಕಿಕೊಂಡಿರುವ ಶಂಕೆ ಇದೆ. ಹೀಗಾಗಿ ಬುಧವಾರ ಮತ್ತೆ ಶೋಧ ಕಾರ್ಯ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next