Advertisement
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಮೊದಲು ಸಹಕಾರಿ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಲಿ, ನಾವು ಕೇಂದ್ರದ ಮೇಲೆ ಒತ್ತಡ ತರಲು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರು.
Related Articles
Advertisement
ಅರಿವಿಲ್ಲದೆ ವಿರೋಧ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಇಫ್ತಾರ್ಕೂಟ ಆಯೋಜಿಸಿದ್ದರ ಬಗ್ಗೆ ಹಿಂದೂ ಧರ್ಮದ ವಾರಸುದಾರರೆನಿಸಿಕೊಂಡ ಕೆಲವರು ಸಂವಿಧಾನ ಹಾಗೂ ಹಿಂದೂ ಧರ್ಮದ ಮೂಲ ಆಶಯಗಳ ಅರಿವಿಲ್ಲದೆ ವಿರೋಧಕ್ಕೆ ಮುಂದಾಗಿದ್ದಾರೆ ಎಂದರು.
ಆಹಾರ ಪದ್ಧತಿ ಬಗ್ಗೆ ಅನೇಕ ಬಾರಿ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. ಆದರೂ ಕೆಲವರು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸಲು ಗೋ ಮಾಂಸ ಕುರಿತಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ವೇದ- ಉಪನಿಷತ್ಗಳ ಕಾಲದಲ್ಲೂ ಗೋ ಮಾಂಸ ಭಕ್ಷಣೆ ಇತ್ತು ಎಂಬ ಉಲ್ಲೇಖಗಳಿವೆ ಎಂದರು. ಪತ್ರಕರ್ತರಾದ ರವಿ ಬೆಳಗೆರೆ, ಅನಿಲ ಅವರ ವಿರುದ್ಧ ಶಿಕ್ಷೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ, ಮಾಧ್ಯಮ ರಂಗ ಮುಖ್ಯ ಸ್ತಂಭಗಳು.
ಎರಡರ ನಡುವೆ ಸಂಘರ್ಷ ತರವಲ್ಲ. ಹಕ್ಕುಚ್ಯುತಿ ಸಮಿತಿಯ ಪ್ರಕರಣ ವಿಧಾನಸಭೆಯಲ್ಲಿ ನಡೆದಿದ್ದು, ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ. ನೈಸರ್ಗಿಕ ನ್ಯಾಯದಡಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಮಿತಿ ಕೈಗೊಂಡಿರುತ್ತದೆ. ಪ್ರಕರಣ ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಾಣುವುದು ಅವಶ್ಯವಾಗಿದೆ ಎಂದರು.