Advertisement

ಸುಪ್ರೀಂ ಕೋರ್ಟ್ ನಲ್ಲಿ ಇಂದೇ ಅನರ್ಹ ಶಾಸಕರ ಅರ್ಜಿ ವಿಚಾರಣೆ

07:24 AM Oct 23, 2019 | keerthan |

ಬೆಂಗಳೂರು: ಸ್ಪೀಕರ್‌ ಅನರ್ಹತೆ ನಿರ್ಧಾರ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿದೆ.

Advertisement

17 ಶಾಸಕರು ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆ ಒಂದು ವಾರ ಮುಂದೂಡುವಂತೆ ಕಾಂಗ್ರೆಸ್‌ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಸೋಮವಾರ ಮನವಿ ಮಾಡಿದರಾದರೂ ವಾರ ಸಮಯ ನೀಡಲು ಆಗದು ಒಂದು ದಿನ ಅವಕಾಶ ಕೊಡಬಹುದು ಎಂದು ಬುಧವಾರಕ್ಕೆ ಮುಂದೂಡಿತ್ತು.

ಆದರೆ ಚುನಾವಣಾ ಆಯೋಗದ ಪರ ವಕೀರರು ನ್ಯಾಯಾಲಯಕ್ಕೆ ಮನವಿ ಮಾಡಿ, ಉಪ ಚುನಾವಣೆ ದಿನಾಂಕ ಘೋಷಿಸಿರುವುದರಿಂದ ಬೇಗನೆ ಇತ್ಯರ್ಥ ಪಡಿಸಿ ಎಂದು ಮನವಿ ಮಾಡಿದರು. ಹೀಗಾಗಿ, ಮಂಗಳವಾರವೇ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ತೀರ್ಮಾನಿಸಿತು. ನ್ಯಾ. ಎ. ವಿ.ರಮಣ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಅನರ್ಹತೆಗೊಂಡ ಶಾಸಕರ ಪರ ಮುಕುಲ್‌ ರೋಹ್ಟಗಿ ವಾದ ಮಂಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next