Advertisement

ಬಸ್ಸಿನಿಂದ ಬಿದ್ದು ವಿದ್ಯಾರ್ಥಿಗೆ ತೀವ್ರ ಗಾಯ

02:15 PM Sep 24, 2017 | Team Udayavani |

ಸುರತ್ಕಲ್‌: ಕೊಟ್ಟಾರ ಚೌಕಿ ಬಳಿ ಬಸ್‌ನಿಂದ ಇಳಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ರಸ್ತೆಗೆ ಬಿದ್ದ ವಿದ್ಯಾರ್ಥಿಯೊಬ್ಬನನ್ನು ಆಸ್ಪತ್ರೆಗೆ ಸೇರಿಸದೆ ದಾರಿ ಮಧ್ಯೆಯೇ ಬಸ್‌ ಸಿಬಂದಿ ಬಿಟ್ಟು ಹೋದ ಘಟನೆ ಸೆ. 21ರಂದು ಸಂಭವಿಸಿದೆ.

Advertisement

ಚಿನ್ಮಯ ಶರ್ಮ (18) ಬಸ್ಸಿನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿ. ಮಾಲೇಮಾರ್‌ – ಕೊಟ್ಟಾರಚೌಕಿ ನಡುವೆ ಸಂಚರಿಸುವ ಖಾಸಗಿ ಬಸ್‌ ಏರಿದ್ದ ಚಿನ್ಮಯ ಕೊಟ್ಟಾರ ಚೌಕಿಯತ್ತ ಬಸ್‌ ಸಾಗುತ್ತಿದ್ದಂತೆ ಬಸ್‌ ಮಂಗಳೂರು ನಗರದತ್ತ ಹೋಗುತ್ತಿಲ್ಲ ಎಂದ ತಿಳಿದು ಇಳಿಯುವ ಸಂದರ್ಭ ಅನಿರೀಕ್ಷಿತವಾಗಿ ಬಿದ್ದು ಗಾಯಗೊಂಡಿದ್ದರು. ಆದರೆ ಸಿಬಂದಿ ಕನಿಷ್ಠ ಮಾನವೀಯತೆಯನ್ನೂ ತೋರದೆ ಗಾಯಾಳುವನ್ನು ಕೆಟ್ಟ ಶಬ್ದಗಳಲ್ಲಿ ನಿಂದಿಸಿ ರಸ್ತೆಯಲ್ಲೇ ಬಿಟ್ಟು ತೆರಳಿದ್ದರು ಎನ್ನಲಾಗಿದೆ. ವಿದ್ಯಾರ್ಥಿಯ ಗಲ್ಲಕ್ಕೆ ತೀವ್ರವಾಗಿ ಏಟು ಬಿದ್ದಿದ್ದು ಎರಡು ಕಡೆ ಮೂಳೆ ಮುರಿತ ಸಂಭವಿಸಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರು ನೀಡಿದ ದೂರಿನ ಮೇರೆಗೆ ಉತ್ತರ ಸಂಚಾರ ಪೊಲೀಸರು ಬಸ್‌ ಚಾಲಕ, ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next