Advertisement

“ಅಳಿದು ಉಳಿದವರ’ಕಥೆ

05:00 PM Dec 06, 2017 | |

ಆಶು ಬೆದ್ರ ಬಣ್ಣದ ಲೋಕಕ್ಕೆ ನಟರಾಗಿ ಬಂದು ಆ ನಂತರ ನಿರ್ಮಾಪಕರಾದವರು. “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’ ಚಿತ್ರ ನಿರ್ಮಿಸಿದ್ದು ನಿಮಗೆ ಗೊತ್ತಿರಬಹುದು. ನಿರ್ಮಾಪಕರಾದರೂ ಅವರ ಮನದ ಮೂಲೆಯಲ್ಲಿ ಕ್ಯಾಮರಾ ಮುಂದೆ ನಿಲ್ಲುವ ಆಸೆ ಇತ್ತು.

Advertisement

ಆ ಆಸೆ ಈಗ ಈಡೇರಿದೆ. ಅದು ಚಿತ್ರವೊಂದಕ್ಕೆ ಹೀರೋ ಆಗುವ ಮೂಲಕ. ಹೌದು, ಆಶು ಬೆದ್ರ “ಅಳಿದು ಉಳಿದವರು’ ಎಂಬ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಸದ್ದಿಲ್ಲದೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಈಗ ಟೀಸರ್‌ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಆಶು ಬೆದ್ರ ಕ್ಯಾಮರಾ ಮುಂದೆ ನಿಲ್ಲುವ ಮುನ್ನ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರಂತೆ. ಹಾಗಾಗಿ, ಯಾವುದೇ ಗೊಂದಲ, ಟೆನ್ಷನ್‌ ಇಲ್ಲದೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರಂತೆ. ಈ ಚಿತ್ರವನ್ನು ಅರವಿಂದ್‌ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಈ ಹಿಂದೆ “ಕಹಿ’ ಸಿನಿಮಾ ನಿರ್ದೇಶಿಸಿದ್ದರು ಅರವಿಂದ್‌. ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ “ಅಳಿದು ಉಳಿದವರು’ ಮಾಡುತಿದ್ದಾರೆ. ಚಿತ್ರಕ್ಕೆ ಸಂಗೀತಾ ಭಟ್‌ ನಾಯಕಿ. ಚಿತ್ರದಲ್ಲಿ ಅತುಲ್‌ ಕುಲಕರ್ಣಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಪವನ್‌ ಕುಮಾರ್‌, ಬಿ.ಸುರೇಶ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಮಿಥುನ್‌ ಮುಕುಂದನ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next