Advertisement

ಗೋರಿ ಆದ್ಮೇಲೆ ಹುಟ್ಟಿದ್‌ ಕಥೆ …

10:50 AM Sep 17, 2019 | Team Udayavani |

“ಕಾಣದಂತೆ ಮಾಯವಾದನು’ ಚಿತ್ರತಂಡ “ಟ್ಯಾಗ್‌ಲೈನ್‌ ಹೇಳಿ 50 ಸಾವಿರ ಗೆಲ್ಲಿ’ ಎಂಬ ಸ್ಪರ್ಧೆ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಈಗ ಚಿತ್ರಕ್ಕೆ ಟ್ಯಾಗ್‌ಲೈನ್‌ ಹೇಳಿ ಒಬ್ಬರು 50 ಸಾವಿರ ರೂಪಾಯಿ ಗೆದ್ದಿದ್ದಾರೆ. ನರೇಂದ್ರ ಎಸ್‌ ಸಂಗೊಳ್ಳಿ ಎನ್ನುವವರು ಚಿತ್ರಕ್ಕೆ “ಗೋರಿ ಆದ್ಮೇಲೆ ಹುಟ್ಟಿದ್‌ ಕಥೆ’ ಎಂಬ ಟ್ಯಾಗ್‌ಲೈನ್‌ ಸೂಚಿಸಿದ್ದಾರೆ. ಚಿತ್ರತಂಡ ಈ ಟ್ಯಾಗ್‌ಲೈನ್‌ ಅನ್ನೇ ಇಟ್ಟುಕೊಂಡಿದೆ.

Advertisement

ಸುಮಾರು 3 ಸಾವಿರಕ್ಕೂ ಅಧಿಕ ಟ್ಯಾಗ್‌ಲೈನ್‌ಗಳು ಬಂದಿದ್ದು, ಅದರಲ್ಲಿ ಇದು “ಗೋರಿ ಆದ್ಮೇಲೆ ಹುಟ್ಟಿದ್‌ ಕಥೆ’ ಆಯ್ಕೆಯಾಗಿದೆ. “ಬ್ಯಾಕ್‌ ಬೆಂಚರ್ಸ್‌ ಮೋಷನ್‌ ಪಿಕ್ಚರ್ಸ್‌’ ಲಾಂಛನದಲ್ಲಿ ಚಂದ್ರಶೇಖರ್‌ನಾಯ್ಡು, ಸೋಮ್‌ಸಿಂಗ್‌ ಹಾಗೂ ಪುಷ್ಪ ಸೋಮ್‌ಸಿಂಗ್‌ ಜಂಟಿಯಾಗಿ ನಿರ್ಮಿಸಿರುವ “ಕಾಣದಂತೆ ಮಾಯವಾದನು’ ಹಾರರ್‌ ಶೈಲಿಯ ಚಿತ್ರವಾಗಿದ್ದು, ರಾಜ್‌ ಪತ್ತಿಪಾಟಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಈ ಹಿಂದೆ “ಜಯಮ್ಮನ ಮಗ’ ಚಿತ್ರವನ್ನು ನಿರ್ದೇಶಿಸಿದ್ದ ವಿಕಾಸ್‌ ಈ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಸಿಂಧು ಲೋಕನಾಥ್‌ ಈ ಚಿತ್ರದ ನಾಯಕಿ. ಅಚ್ಯುತಕುಮಾರ್‌, ವಿನಯಾ ಪ್ರಸಾದ್‌, ಸುಚೇಂದ್ರ ಪ್ರಸಾದ್‌, ರಾಘವ್‌ ಉದಯ್‌, ಭಜರಂಗಿ ಲೋಕಿ, ಧರ್ಮಣ್ಣ, ಸೀತಾಕೋಟೆ, ಸನ್ನಿ ಮಹಿಪಾಲ್‌, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ನವೆಂಬರ್‌ನಲ್ಲಿ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next