Advertisement
ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಮಾತ್ರ ಮುಂದಾಗುತ್ತಿಲ್ಲ ಕೆಲ ದೃಶ್ಯ ಮಾಧ್ಯಮಗಳು ಮುಂದಾಗುತ್ತಿವೆ. ಸರ್ಕಾರ ಪತನವಾಗುವ ವಿಷಯ ಸತ್ಯಕ್ಕೆ ದೂರವಾದುದು ನಾಲ್ಕು ವರ್ಷ ಸುಭದ್ರವಾಗಿ ಇರಲಿದೆ. ನಾನೇ ಮುಖ್ಯ ಮಂತ್ರಿಯಾಗಿ ರಾಜ್ಯದ 6 ಕೋಟಿ ಕನ್ನಡಿಗರ ಸೇವೆ ಮಾಡುತ್ತೇನೆ ಎಂದರು.
Related Articles
Advertisement
ಮೇ 23 ಡೆಡ್ ಲೈನ್: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಪಕ್ಷದ ಮುಖಂಡರು ಮೇ 23 ರಾಜ್ಯ ಸರ್ಕಾರಕ್ಕೆ ಡೆಡ್ಲೈನ್ ನೀಡಿದ್ದಾರೆ. ರಾಜಕಾರಣದಲ್ಲಿ ಇದು ಮಾಮೂಲು ಕುಮಾರಸ್ವಾಮಿ ನೆಗೆದು ಬಿದ್ದು ಹೋದ ಎಂದಿದ್ದರು, ಬಿಜೆಪಿ ನಾಯಕರ ಮಾತಿಗೆ ಮಾಧ್ಯಮದವರು ಮಹತ್ವ ನೀಡಬಾರದು, ಈ ವರೆಗೆ ಮಂಡ್ಯದ ಧಾರಾವಾಹಿ ಇತ್ತು ಈಗ ಸರ್ಕಾರದ ಕಡೆ ವಾಲುತ್ತಿದ್ದಾರೆ ಎಂದರು.
ಕೇಂದ್ರದಲ್ಲಿ ಮೈತ್ರಿ ಸರ್ಕಾರ: ರಾಜ್ಯದ ರೀತಿ ದೇಶದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ. ಇದರಿಂದ ರಾಜ್ಯಕ್ಕೆ ರಕ್ಷಣೆ ಸಿಗುತ್ತದೆ. ಹಿಂದೆ ಭಾಷೆಯ ರಾಜ್ಯಗಳಲ್ಲಿ ಮೋದಿ ಶಕ್ತಿ ಕುಗ್ಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ನಿತ್ಯ ಮಾಹಿತಿ ನೀಡುತ್ತಿದ್ದಾರೆ. ಕರ್ನಾಟಕ ಹೊರತುಪಡಿಸಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಗೆ ನೆಲೆ ಇಲ್ಲ ಹಾಗಾಗಿ ಕೇಂದ್ರದಲ್ಲಿ ಘಟಬಂಧನ್ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಮೋದಿ ಹೆಸರಿನಲ್ಲಿ ಮತ ಕೇಳಿದ್ದರಿಂದ ನಷ್ಟ: ದೇಶದಲ್ಲಿ ಮೋದಿ ವರ್ಚಸ್ಸು ಕುಗ್ಗಿರುವಾಗ ಅವರ ಹೆಸರಿನಲ್ಲಿ ಮತಯಾಚನೆ ಮಾಡಿದ್ದರಿಂದ ಬಿಜೆಪಿಗೆ ಲಾಸು ಮೈತ್ರಿ ಪಕ್ಷಕ್ಕೆ ಲಾಭವಾಗುತ್ತಿದೆ. ಮೋದಿ ಸಾಧನೆ ಭಾಷಣ ಮಾಡಿಲ್ಲ ಹಾಗಾಗಿ ಜನ ಅವರಿಗೆ ಮತಹಾಕಿಲ್ಲ, ಮಂಡ್ಯ ಹಾಸನ ಮತ್ತು ತುಮಕೂರು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು. ಸಚಿವ ಸಾ.ರಾ.ಮಹೇಶ್, ಶಾಸಕ ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.