Advertisement

ಡಿ.ಕೆ.ಶಿವಕುಮಾರ್‌ರಿಂದ ಕಾಂಗ್ರೆಸ್‌ಗೆ ಚೈತನ್ಯ

05:18 AM Jul 03, 2020 | Lakshmi GovindaRaj |

ಶ್ರೀರಂಗಪಟ್ಟಣ: ಡಿಕೆಶಿ ಅಧ್ಯಕ್ಷರಾಗಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಚೈತನ್ಯ ಬಂದಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ ಹೇಳಿದರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಧಿಕಾರ  ಸ್ವೀಕಾರ ಸಮಾರಂಭದ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಡಿಕೆಶಿ ಅವರು ಅನುಭವಿ ರಾಜಕಾರಣಿ. ಪಕ್ಷದ ಎಲ್ಲಾ ಹಿರಿಯರ ಸಲಹೆ ಪಡೆದಿದ್ದಾರೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಅವರಿಗಿದೆ. ಇದರಿಂದ  ಯುವ ಜನಾಂಗದ ಮೂಲಕ ಪಕ್ಷ ಸಂಘಟನೆಗೆ ತಂದಿದೆ. ಅವರ ನಾಯಕತ್ವದಲ್ಲಿ ಮುಂದೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಪುರಸಭಾ ಸದಸ್ಯ ಎಂ.ಎಲ್‌.ದಿನೇಶ್‌  ನೇತೃತ್ವದಲ್ಲಿ ಗಂಜಾಂ ಹೊಸಹಳ್ಳಿ, ಕಿರಂಗೂರಲ್ಲಿ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಉಸ್ತುವಾರಿ ಎಚ್‌.ಆರ್‌ ಭಾಸ್ಕರ್‌, ಕೆಪಿಸಿಸಿ ಸದಸ್ಯ ಎನ್‌.ಗಂಗಾಧರ್‌, ಕೆಪಿಸಿಸಿ ಮಾಜಿ ಸದಸ್ಯ  ಎಂ.ಭಾಸ್ಕರ್‌, ಮುಖಂಡರಾದ ಪಿ.ಎಚ್‌.ಚಂದ್ರಶೇಖರ್‌, ಗೋಪಾಲಗೌಡ, ನಾರಾಯಣ್‌, ಯುವ ಘಟಕದ ಅಧ್ಯಕ್ಷ ಗುಣವಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next