Advertisement

Session:ಅಂಗಿ-ಪಂಚೆ ಧರಿಸಿ ಬಂದ ಸ್ಪೀಕರ್‌

11:20 PM Dec 12, 2023 | Team Udayavani |

ಬೆಳಗಾವಿ: ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ತುಳು ಸಂಪ್ರದಾಯದ ರೀತಿಯಲ್ಲಿ ಅಂಗಿ-ಪಂಚೆ ಧರಿಸಿ ಮಂಗಳವಾರ ಸಂಜೆ ಸದನಕ್ಕೆ ಆಗಮಿಸಿದ್ದನ್ನು ಕಂಡು ಬಿಜೆಪಿ ಸದಸ್ಯ ಡಾ| ಅಶ್ವತ್ಥ ನಾರಾಯಣ ಅವರು ಸರ್‌ ಮದುಮಗ ಕಂಡಂತೆ ಕಾಣುತ್ತೀರಿ ಎಂದರೆ, ಸುನಿಲ್‌ ಕುಮಾರ್‌, ಇದೇನು ಸರ್‌ ನೀವೊಬ್ಬರೆ ಅಂತಹ ಉಡುಪು ಧರಿಸಿದರೆ ಹೇಗೆ? ಇದು ಅನ್ಯಾಯ ಎಂದರು.

Advertisement

ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮಾಚರಣೆ ಸುವರ್ಣವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದರಿಂದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ತುಳು ಸಂಪ್ರದಾಯದ ಉಡುಪು ಇರಲಿ ಎಂದು ಇದನ್ನು ಧರಿಸಿದ್ದೇನೆ. ಸದನದ ಎಲ್ಲ ಸದಸ್ಯರ ಪರವಾಗಿ ಈ ವಸ್ತ್ರದಲ್ಲಿ ಪಾಲ್ಗೊಳ್ಳುತ್ತೇನೆ. ನೀವು ಸಹ ಈ ವಸ್ತ್ರ ಧರಿಸಿದಂತೆ ಅಲ್ಲವೇ ಎಂದು ನಕ್ಕು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next