Advertisement

Kalaburagi ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ತಾಯಿಯನ್ನೆ ಕೊಂದ ಮಗ!

09:12 PM Feb 05, 2024 | Team Udayavani |

ಕಲಬುರಗಿ: ಮದ್ಯ ಸೇವಿಸಲು ಹಣ ನೀಡುತ್ತಿಲ್ಲ ಹಾಗೂ ತನಗೆ ಮದುವೆ ಮಾಡಲಿಲ್ಲ ಎಂಬ ಕೋಪದಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಠಾಣೆ ವ್ಯಾಪ್ತಿಯ ಪೋಚಾವರಂದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

Advertisement

ಶೋಭಾ ಅಂಜಪ್ಪ ಬ್ಯಾಗೇರಿ ( 45) ಕೊಲೆಗೀಡಾದವರಾಗಿದ್ದು, ಅನಿಲ್‌ಕುಮಾರ್‌ ಅಂಜಪ್ಪ ಬ್ಯಾಗೇರಿ ( 25) ಆರೋಪಿ. ಈತನು ಕಟ್ಟಿಗೆ ಹಾಗೂ ಕಲ್ಲುಗಳಿಂದ ಹೊಡೆದು ತಾಯಿಯನ್ನು ಕೊಂದು ಪರಾರಿಯಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಸಫ‌ಲರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next