Advertisement

ಪರಿಸ್ಥಿತಿ ತಿಳಿಗೊಳ್ಳುವ ಮೊದಲು ಇನ್ನಷ್ಟು ಕಷ್ಟ

12:30 AM Feb 01, 2019 | |

ಹೊಸದಿಲ್ಲಿ: ಜೆಟ್‌ ಏರ್‌ವೆಸ್‌ ವಿಮಾನ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟದ ದಿನಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದಿದ್ದಾರೆ ಸಂಸ್ಥೆಯ ಸಿಇಒ. ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ಪತ್ರ ಬರೆದಿರುವ ಸಿಇಒ ವಿನಯ ದುಬೆ, ಸದ್ಯ ಉಂಟಾಗಿರುವ ಬಿಕ್ಕಟ್ಟು ಶೀಘ್ರದಲ್ಲಿಯೇ ಪರಿಹಾರವಾಗುವ ವಿಶ್ವಾಸವಿದೆ ಎಂದಿದ್ದಾರೆ. ಆದರೆ, ಅದಕ್ಕಿಂತ ಮೊದಲು ಪರಿಸ್ಥಿತಿ ಬಿಗಡಾಯಿಸಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಸಂಸ್ಥೆಯ ಅಧ್ಯಕ್ಷ ನರೇಶ್‌ ಗೋಯಲ್‌ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಸಮಸ್ಯೆ ನಿವಾರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. ಹಣಕಾಸಿನ  ಬಿಕ್ಕಟ್ಟು ಎದುರಿಸುತ್ತಿರುವ ಜೆಟ್‌ ಏರ್‌ವೆಸ್‌ 8 ಸಾವಿರ ಕೋಟಿ ರೂ. ಸಾಲ ಎದುರಿಸುತ್ತಿದೆ. ಎತಿಹಾದ್‌, ಟಾಟಾ ಸಂಸ್ಥೆ, ದೇಶಿಯ ವಿಮಾನ ಯಾನ ಸಂಸ್ಥೆಗಳ ಜತೆಗೆ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದರೂ ಫ‌ಲ ಬೀರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next