Advertisement

ಕುರಿ ಅಡ್ಡ ಬಂದದ್ದಕ್ಕೆ ಮಹಿಳೆಯ ಬಟ್ಟೆ ಎಳೆದ

10:56 PM Dec 28, 2019 | Lakshmi GovindaRaj |

ನಾಗಮಂಗಲ (ಮಂಡ್ಯ): ಕುರಿಗಳನ್ನು ಕಾರಿಗೆ ಅಡ್ಡ ಬಿಟ್ಟಳೆಂಬ ಕಾರಣಕ್ಕೆ ಮಹಿಳೆಯ ಬಟ್ಟೆ ಹಿಡಿದು ಎಳೆದಾಡಿದ ನಿವೃತ್ತ ಅರಣ್ಯಾಧಿಕಾರಿಯ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಬಂಕಾಪುರದ ತೋಟದ ಮನೆಯ ಬಳಿ ಗ್ರಾಮದ ಜಯರತ್ನ ಎಂಬುವರು ಕುರಿ ಮೇಯಿಸುತ್ತಿದ್ದರು.

Advertisement

ಈ ವೇಳೆ, ಅದೇ ಊರಿನಲ್ಲಿ ಜಲ್ಲಿ ಕ್ರಷರ್‌ ನಡೆಸುತ್ತಿರುವ ಉಮಾದೇವಿ ಎಂಬುವರ ಪತಿ, ನಿವೃತ್ತ ಅರಣ್ಯಾಧಿಕಾರಿ ರಾಮಲಿಂಗೇಗೌಡ ಕಾರಿನಲ್ಲಿ ಬರುತ್ತಿದ್ದ. ಕುರಿಗಳು ಕಾರಿಗೆ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ರಾಮಲಿಂಗೇಗೌಡ, ಜಯರತ್ನರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ.

ಮಾತಿಗೆ, ಮಾತು ಬೆಳೆದಾಗ ರಾಮಲಿಂಗೇಗೌಡ, ಮಹಿಳೆಯ ಬಟ್ಟೆ ಎಳೆಯತೊಡಗಿದ. ಜಯರತ್ನರ ಕಿರುಚಾಟ ಕೇಳಿ ಮನೆಯಲ್ಲಿದ್ದ ಗಂಡ ರಾಮಚಂದ್ರ ಹಾಗೂ ಇತರರು ಓಡಿ ಬಂದರು. ಅರೆಬಟ್ಟೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಪತ್ನಿಯನ್ನು ಮೇಲಕ್ಕೆತ್ತಿದ ರಾಮಚಂದ್ರ, ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next