ನೀಡುವುದು ಮುಖ್ಯವಾಗಿರುತ್ತದೆ ಎಂದು ನೇಚರ್ ಫಸ್ಟ್ ಇಕೋ ವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಹೇಳಿದರು.
Advertisement
ಇಲ್ಲಿಯ ಕೃಷಿ ವಿವಿಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಇಕೋವಿಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಯಶಸ್ವಿ ನವೋದ್ಯಮಿ ಕಾರ್ಯಗಾರ ಮತ್ತು ಹೊಸ ವಿಚಾರಗಳು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಆರ್ಥಿಕವಾಗಿ ಸುರಕ್ಷತೆ ಇರುವ ನೌಕರಿ ಪಡೆಯಲು ಹಂಬಲಿಸುತ್ತಾರೆ. ಆರ್ಥಿಕ ಸುರಕ್ಷತೆಯ ಹುಡುಕಾಟದಲ್ಲಿ ತಮ್ಮ ಸ್ವಶಕ್ತಿಯನ್ನೇ ಮರೆತು ಬಿಡುತ್ತಾರೆ. ಯಾವಾಗ ನೌಕರಿಯಲ್ಲಿ ಸಮಾಧಾನ ಕಾಣುವುದಿಲ್ಲವೋ ಆಗ ಸ್ವಂತ ಉದ್ಯೋಗದ ಯೋಚನೆ ಬರುತ್ತದೆ. ಆದರೆ ಆಗ ಸಮಯ ಮೀರಿ ಹೋಗಿರುತ್ತದೆ. ಹೀಗಾಗಿ, ಸ್ವಂತ ಉದ್ಯೋಗ ಮಾಡಬೇಕೆನ್ನುವ ಯುವಜನತೆ ಮುಖ್ಯವಾಗಿ ದೃಢ ನಿರ್ಧಾರ ಮಾಡಬೇಕು ಎಂದರು. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥರಾದ ಡಾ| ಸುಮಾಹಾಸಲಕರ ಮಾತನಾಡಿದರು. ವಿದ್ಯಾರ್ಥಿಗಳಾದ ಹಾಲಪ್ಪ ಹಾಗೂ ಪ್ರೇಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕರಾದ ರಮ್ಯಾ ಬಡಿಗನ್ನವರ ಇನ್ನಿತರರಿದ್ದರು.