Advertisement

ಕುರುಬ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

02:47 PM Aug 25, 2020 | Suhan S |

ಕನಕಪುರ: ಕುರುಬ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಂಘದ ನೂತನ ಅಧ್ಯಕ್ಷ ಎಂ.ಎಸ್‌.ಚಂದ್ರಪ್ಪ ತಿಳಿಸಿದರು. ತಾಲೂಕಿನ ಸಾತನೂರು ಹೋಬಳಿ ದೊಡ್ಡಾಆಲಹಳ್ಳಿ ಗ್ರಾಮದ ಗೆಜ್ಜೆ ಕಲ್ಲು ಬೀರೇಶ್ವರ ದೇವಾಲಯದಲ್ಲಿ ನಡೆದ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

Advertisement

ಸಂಘದ ಹಿರಿಯ ಮುಖಂಡರು ತನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕುರುಬ ಸಮುದಾಯವನ್ನು ಸಮಾಜದಲ್ಲಿ ಮೇಲೆತ್ತಲು ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು ಸಹಕರಿಸಬೇಕೆಂದರು. ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೌರವ ಅಧ್ಯಕ್ಷ ಸಂದರೇಶ್‌ ಪೂಜಾರಿ, ಕುರುಬರ ಸಂಘದ ಅಭಿವೃದ್ಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಹಿರಿಯ ಮುಖಂಡರು, ಸದಸ್ಯರ ಸಲಹೆ ಪಡೆದು ಸಮುದಾಯದ ಕ್ಷೇಮಾಭಿವೃದ್ಧಿಗೆ ಶ್ರಮಿ ಸುತ್ತೇನೆಂದರು.  ಸಂಘದ ಹಿರಿಯ ಮುಖಂಡರಾದ ಮಹದೇವಯ್ಯ, ಮುನಿಹುಚ್ಚೇಗೌಡ, ರವಿ, ನಟರಾಜ್‌, ಬೋಜೇಗೌಡ, ಚಿಕ್ಕಣ್ಣ, ಪ್ರದೆಶ ಕುರುಬರ ಸಂಘದ ನಿರ್ದೇಶಕರಾದ ಚಿಕ್ಕಮ್ಮ, ಕೃಷ್ಣಕಾಂತ್‌, ಸತೀಶ್‌ ಮತ್ತಿತರರಿದ್ದರು.

ಪದಾಧಿಕಾರಿಗಳು: ಅನೇಕ ಸಂಘದ ಮುಖಂಡರ ಸಮ್ಮುಖದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್‌. ಚಂದ್ರಪ್ಪ, ಗೌರವ ಅಧ್ಯಕ್ಷ ಸುಂದರೇಶ್‌ಪೂಜಾರಿ, ಕಾರ್ಯಾಧ್ಯಕ್ಷ ಆನಂದ್‌, ಪ್ರಧಾನ ಕಾರ್ಯದರ್ಶಿ ಮಹೇಶ್‌, ಖಜಾಂಚಿಯಾಗಿ ಡಿ.ರುದ್ರೇಶ್‌ ಅವರನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next