Advertisement

ಪಡುಬಿದ್ರಿಯಲ್ಲಿ ಸಮುದ್ರ ಅಬ್ಬರ: ಕೊಚ್ಚಿ ಹೋದ ತಾತ್ಕಾಲಿಕ ರಸ್ತೆ

02:54 PM Jun 25, 2019 | Team Udayavani |

ಪಡುಬಿದ್ರಿ: ಬ್ಲೂ ಫ್ಲ್ಯಾಗ್‌ ಯೋಜನಾ ಪ್ರದೇಶವಾದ ಪಡುಬಿದ್ರಿ ಎಂಡ್‌ ಪಾಯಿಂಟ್ ಬಳಿ ಸಮುದ್ರದ ಅಬ್ಬರದ ಅಲೆಗಳಿಂದಾಗಿ ಕಡಲ ತೀರದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ.

Advertisement

ಸಮುದ್ರ ತೀರದಲ್ಲಿ ಈ ಹಿಂದೆ ಇದ್ದ ಗಿಡಗಂಟಿಗಳ ತೆರವು ಮಾಡಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಮಾಡಿ ಬ್ಲೂ ಪ್ಲ್ರಾಗ್‌ ಬೀಚ್ ಯೋಜನಾ ಪ್ರದೇಶಕ್ಕೆ ವಾಹನಗಳ ಮೂಲಕ ಸಾಮಗ್ರಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ತಳಪಾಯದ ಕಾಮಗಾರಿಗಳಿಗಾಗಿ ಅಗೆಯಲಾದ ಗುಂಡಿಗಳಿಗೆ ಸಮುದ್ರದ ಉಸುಕು ಬೀಸಲ್ಪಡುತ್ತಿದೆ. ಈ ಭಾಗದಲ್ಲಿ ಕಡಲ ತೆರಗಳ ಅಬ್ಬರ ಮುಂದುವರಿದಿದ್ದು ಸಮುದ್ರ ಕೊರೆತದ ಲಕ್ಷಣವೂ ಗೋಚರಿಸಿದೆ.

ಸುಮಾರು 500 ಮೀಟರ್‌ ಸರಕಾರಿ ಜಮೀನಿನಲ್ಲಿ ಕೇಂದ್ರ ಸರಕಾರದ ಅನುದಾನವಾದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನವಾಗಲಿರುವ ಬ್ಲೂ ಪ್ಲ್ರಾಗ್‌ ಬೀಚ್ ಯೋಜನೆಗೆ ಅನುಕೂಲವಾಗುವಂತೆ 50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್‌ ವ್ಯಾಪ್ತಿಯಲ್ಲಿ ಕೆಐಆರ್‌ಡಿಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಮೂಲಕ ಎಂಡ್‌ ಪಾಯಿಂಟ್ ಪೂರ್ವ ಭಾಗದಲ್ಲಿನ ಕಾಮಿನಿ ನದಿಗೆ ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಪಡುಬಿದ್ರಿ ಹೆಜಮಾಡಿ ಮುಟ್ಟಳಿವೆಯನ್ನು ನಿನ್ನೆಯಷ್ಟೇ ತೆರೆದು ಕೊಡಲಾಗಿರುವುದರಿಂದ ನದಿ ನೀರಿನ ಅಬ್ಬರವೂ ನಿನ್ನೆಯಷ್ಟೇ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next