Advertisement

Yellapura: ಬೈಕ್‌ ಮೇಲೆ ಮರ ಬಿದ್ದು ಸವಾರ ಬಲಿ

04:12 PM Jul 24, 2024 | Team Udayavani |

ಯಲ್ಲಾಪುರ: ಬೈಕ್ ಸವಾರನೊಬ್ಬನ ಮೇಲೆ  ಮರ ಬಿದ್ದು ದಾರುಣ ಸಾವು ಕಂಡ ಘಟನೆ ಬುಧವಾರ (ಜು.24ರಂದು) ಬೆಳಗ್ಗೆ ಯಲ್ಲಾಪುರ ತಾಲೂಕಿನ ಮಾಳಕೊಪ್ಪ ಶಾಲೆಯ ಎದುರು ನಡೆದಿದೆ.

Advertisement

ಸ್ಥಳೀಯ ಕಬ್ಬಿನಗದ್ದೆಯ ವಿನಯ ಮಂಜುನಾಥ  ಗಾಡಿಗ(24) ಮೃತ ದುರ್ಧೈವಿ.

ಈತ ಮನೆಯಿಂದ ತನ್ನ ಬೈಕಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅವರ ಮೇಲೆ ಮರ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತಹಶೀಲ್ದಾರ್ ಅಶೋಕ ಭಟ್ಟ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿ ನಂತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸಿಪಿಐ ರಮೇಶ ಹಾನಾಪುರ, ಪಿಎಸ್ಐ ಸಿದ್ದಪ್ಪ ಗುಡಿ ,ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next