Advertisement

ಕಂದಾಯ ಇಲಾಖೆ ಇಂದೂ ಕಾರ್ಯನಿರ್ವಹಣೆ

06:40 AM Nov 18, 2018 | Team Udayavani |

ಬೆಂಗಳೂರು:ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನ.18 ರಂದು ರಜೆ ದಿನವೂ ಇಲಾಖೆಯ ಎಲ್ಲ ಕಚೇರಿಗಳೂ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಕಡತ ವಿಲೇವಾರಿ ಸಪ್ತಾಹ ಅಂಗವಾಗಿ ಸಾರ್ವಜನಿಕ ರಜೆ ದಿನವಾದ ಭಾನುವಾರವೂ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಲಿವೆ. ನ.18 ರ ದಿನ ಕರ್ತವ್ಯ ದಿನವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಚಿವರ ಕಚೇರಿಯೂ ಸೇರಿದಂತೆ ಕಂದಾಯ ಸಚಿವಾಲಯ, ಪ್ರಾದೇಶಿಕ ಆಯುಕ್ತರು ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿಗಳು, ಉಪ ವಿಭಾಗಾಧಿಕಾರಿ ಕಚೇರಿಗಳು ಹಾಗೂ ಎಲ್ಲ ತಾಲೂಕು ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಕಡತ ಸಪ್ತಾಹ ಪ್ರಾರಂಭವಾದಾಗ ತಮ್ಮ ಕಚೇರಿಯಲ್ಲಿದ್ದ ಕಡತಗಳು ಎಷ್ಟು, ನಂತರ ವಿಲೇವಾರಿಯಾಗಿದ್ದು ಎಷ್ಟು?  ಇನ್ನೂ ಎಷ್ಟು ಬಾಕಿ ಇವೆ ಎಂಬುದನ್ನು ಭಾನುವಾರ ಸಂಜೆಯೊಳಗೆ ಇಲಾಖಾ ಮುಖ್ಯಸ್ಥರು ಮಾಹಿತಿ ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next