Advertisement

‘ಸೋನೆ’ಚುಟುಕು ಸಂಕಲನ ಬಿಡುಗಡೆ

03:49 PM Jan 07, 2018 | Team Udayavani |

ಪಡುವನ್ನೂರು: ಲೇಖಕನ ಭಾವ ಸ್ಪರ್ಶದಿಂದ ಲೇಖನಿ ಸಶಕ್ತವಾಗುವುದು. ಕೃತಿಗಳಿಂದ ಸಮಾಜದ ದೃಷ್ಟಿಕೋನವೂ ಬದಲಾಗುವುದು ಎಂದು ಪೆರ್ನಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಆಚಾರ್ಯ ಹೇಳಿದರು. ಶ್ಯಾಮ್‌ ಪಟ್ಟಾಜೆ ಅವರ ‘ಸೋನೆ’ ಚುಟುಕು ಸಂಕಲನ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

Advertisement

ಸುಶೀಲಾ ನಾರಾಯಣ ಭಟ್‌ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ, ಸಾಹಿತಿ ವಿ.ಬಿ. ಅರ್ತಿಕಜೆ ಮುಖ್ಯ ಅತಿಥಿಯಾಗಿ ಮಾತನಾಡಿ, ಅನುಭವ, ತಣ್ತೀ ಹಾಗೂ ಸತ್ವವಿಲ್ಲದೆ ಕವನ ಬರೆಯಲು ಸಾಧ್ಯವಿಲ್ಲ, ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸುವ ಕೆಲಸವಾಗಬೇಕು ಎಂದರು.

ಕೇರಳ ಶಾಲಾ ಕನ್ನಡ ಉಪನ್ಯಾಸಕ ಜೆ.ಸಿ. ಗೋಪಾಲಕೃಷ್ಣ ಭಟ್‌, ಪಡುಮಲೆ ಶಾಲೆಯ ಮುಖ್ಯ ಶಿಕ್ಷಕ ದೇವಿಪ್ರಸಾದ್‌
ಕೆ.ಸಿ. ಮಾತನಾಡಿದರು. ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್‌ ಪಟ್ಟಾಜೆ ಪ್ರಾಸ್ತಾವಿಕ ಮಾತನಾಡಿದರು. ಕೃತಿಕಾರ ಶ್ಯಾಮ್‌
ಪಟ್ಟಾಜೆ ಸ್ವಾಗತಿಸಿ, ವಂದಿಸಿದರು. ಮಂಗಳೂರು ಎಸ್‌ಡಿಎಂ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕ ಸೂರ್ಯ ನಾರಾಯಣ ಭಟ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next