Advertisement

ಕ್ವಾರಂಟೈನ್‌ ಮುಗಿಸಿದ 35 ಜನರ ಬಿಡುಗಡೆ

12:43 PM May 30, 2020 | Suhan S |

ಅಥಣಿ: ಹರಿಯಾಣ ರಾಜ್ಯದ ಪ್ರವಾಸದಿಂದ ವಾಪಸ್‌ ಆಗಿರುವ ಅಥಣಿ ತಾಲೂಕಿನ 35 ಜನರು ಕ್ವಾರಂಟೈನ್‌ ಪೂರ್ಣಗೊಳಿಸಿ ಶುಕ್ರವಾರ ಮನೆಗೆ ತೆರಳಿದರು.

Advertisement

ತಾಲೂಕಿನ ವಿವಿಧ ಗ್ರಾಮಗಳ ಮುಸ್ಲಿಂ ಸಮುದಾಯ ಬಾಂಧವರು ಧಾರ್ಮಿಕ ಕಾರ್ಯಕ್ರಮಕ್ಕೆ ಹರಿಯಾಣ ರಾಜ್ಯಕ್ಕೆ ಭೇಟಿ ನೀಡಿದ್ದರು. ಕಳೆದ 14ರಂದು ರಾಜ್ಯಕ್ಕೆ ಮರಳಿ ತಾಲೂಕಿನ ಚಮಕೇರಿ ಗ್ರಾಮದ ಸಮೀಪ ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಬಿಡುಗಡೆಗೊಂಡ ದಾವಲ್‌ ಉಸ್ಮಾನ್‌ ಮುಲ್ಲಾ ಮಾತನಾಡಿ, ಇವತ್ತಿಗೆ ಕ್ವಾರಂಟೈನ್‌ ಮುಗಿಸಿದ್ದೇವೆ. ಇಲ್ಲಿದ್ದ ನಮಗೆ ಯಾವುದೇ ವರದಿಗಳು ಪಾಸಿಟಿವ್‌ ಬಂದಿಲ್ಲ. ಆದ್ದರಿಂದ ತಾಲೂಕು ಆಡಳಿತ ಮುಂದಾಳತ್ವದಲ್ಲಿ ಇವತ್ತು ಬಿಡುಗಡೆಗೊಳಿಸಿದರು. ಪ್ರವಾಸಿಗರಿಗೆ ಏಳು ದಿನ ಮನೆಯಲ್ಲಿ ಹೋಮ್‌ ಕ್ವಾರಂಟೈನ್‌ನಲ್ಲಿ ಇರಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next