Advertisement

Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!

12:42 AM Jul 05, 2024 | Team Udayavani |

ಪಟ್ನಾ: ಬಿಹಾರದಲ್ಲಿ 15 ದಿನಗಳ ಅವಧಿಯಲ್ಲಿ 10 ಸೇತುವೆಗಳು ಕುಸಿದಿದ್ದು ಸೇತುವೆಗಳಿಂದ ಅವ್ಯಾಹತ ವಾಗಿ ಹೂಳು ತೆಗೆದದ್ದೇ ಕಾರಣ ಎಂದು ಬಿಹಾರ ಜನಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್‌ ಹೇಳಿದ್ದಾರೆ. ಸುದ್ದಿವಾ ಹಿನಿ ಜತೆ ಮಾತನಾಡಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನೊಂದೆ ಡೆ ಹೂಳು ತೆಗೆಯಲು ವೈಜ್ಞಾನಿಕ ಕ್ರಮ ಅನುಸರಿಸದಿದ್ದದ್ದೂ ಕಾರಣವೆಂದು ತಿಳಿ ದುಬಂದಿರುವುದಾಗಿ ವರದಿಯಾಗಿದೆ.

Advertisement

ಇದೇ ವೇಳೆ, ಸಾರಣ ಜಿಲ್ಲೆಯಲ್ಲಿ ಗುರುವಾರ ಮತ್ತೂಂದು ಸೇತುವೆ ಕುಸಿದಿದೆ. ಈ ಮೂಲಕ ಕಳೆದ 15 ದಿನಗಳಲ್ಲಿ ಕುಸಿದ ಸೇತುವೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅದೇ ಜಿಲ್ಲೆಯಲ್ಲಿ 2 ದಿನಗಳಲ್ಲಿ ಇದು 3ನೇ ಘಟನೆ. ಪ್ರಸ್ತುತ ಕುಸಿದಿರುವ ಸೇತುವೆ 15 ವರ್ಷ ಹಳೆಯದಾಗಿದ್ದು, ಗಂಡಕಿ ನದಿಗೆ ಅಡ್ಡವಾಗಿ ಕಟ್ಟಲಾಗಿತ್ತು.

ಸಮೀಕ್ಷೆಗೆ ಸಿಎಂ ಸೂಚನೆ: ಸಾಲು ಸಾಲು ಸೇತುವೆಗಳು ಕುಸಿದ ಹಿನ್ನೆಲೆ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸಭೆ ನಡೆಸಿದ್ದು, ರಾಜ್ಯದ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ ದುರಸ್ತಿ ಪಡಿಸಲು ಸೂಚಿಸಿದ್ದಾರೆ. ಜತೆಗೆ ಸೇತುವೆ ಕುಸಿತ ವಿರುದ್ಧ ಸುಪ್ರೀಂ ಕೋರ್ಟಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next