Advertisement
ಮಂಗಳವಾರ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಕೇಂದ್ರ ಹಾಗೂ ದಕ್ಷಿಣ ಕೇರಳಗಳಲ್ಲಿ ಅಂದರೆ ಇಡುಕ್ಕಿ, ಅಳಪ್ಪುಳ ಜಿಲ್ಲೆ, ಮೂವತ್ತುಪುಳ, ಎರ್ನಾಕುಳಂನ ಸುತ್ತಮುತ್ತಲಿನ ಪ್ರದೇಶಗಳು, ಕೊಟ್ಟಾಯಂನ ಪೂರ್ವ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಹೀಗಾಗಿ, ಶುಕ್ರವಾರದವರೆಗೂ ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
Related Articles
Advertisement
ಬೀದಿಬದಿ ವ್ಯಾಪಾರಿಯ ಮಾನವೀಯ ಮುಖಕೊಚ್ಚಿಯ ಬೀದಿಬದಿಯ ವ್ಯಾಪಾರಿಯೊಬ್ಬರ ಹೃದಯವು ಪ್ರವಾಹ ಸಂತ್ರಸ್ತರಿಗಾಗಿ ಮಿಡಿದಿದೆ. ಈ ವ್ಯಾಪಾರಿಯ ಹೃದಯ ವೈಶಾಲ್ಯತೆಯು ಜನರ ಮನ ತಟ್ಟಿದೆ. ಬಕ್ರೀದ್ ವೇಳೆ ಸಾಮಾನ್ಯವಾಗಿ ಬೀದಿಬದಿಯ ವ್ಯಾಪಾರಿಗಳಿಗೆ ಸುಗ್ಗಿ. ಹೆಚ್ಚಿನ ವ್ಯಾಪಾರ ಆಗುತ್ತದೆ ಎಂಬ ಉದ್ದೇಶದಿಂದಲೇ ನೌಶಾದ್ ಎಂಬ ವ್ಯಾಪಾರಿಯು ಹೊಸ ಹೊಸ ಉಡುಪುಗಳ ಬಂಡಲ್ಗಳನ್ನು ತಂದು ಗೋದಾಮಿನಲ್ಲಿ ಇಟ್ಟಿದ್ದರು. ಬೀದಿಬದಿಯಲ್ಲಿ ಬಟ್ಟೆಗಳನ್ನಿಟ್ಟು ಮಾರಾಟ ಮಾಡುವ ನೌಶಾದ್ ಈಗ ಈ ಬಟ್ಟೆಯ ಬಂಡಲ್ಗಳನ್ನೇ ನೆರೆ ಸಂತ್ರಸ್ತರಿಗೆ ದಾನವಾಗಿ ನೀಡಿದ್ದಾರೆ. ಗೋದಾಮಿನಿಂದ ಬಟ್ಟೆಗಳ ಬಂಡಲ್ಗಳನ್ನು ಪ್ಯಾಕ್ ಮಾಡಿ, ವಾಹನಗಳಿಗೆ ತುಂಬುತ್ತಿರುವ ನೌಶಾದ್ರ ವೀಡಿಯೋ ಈಗ ವೈರಲ್ ಆಗಿದ್ದು, ಅವರ ಮಾನವೀಯತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ಸಂಚಾರಕ್ಕೆ ಹೆದ್ದಾರಿ ಮುಕ್ತ
ಭಾರೀ ಮಳೆ, ಪ್ರವಾಹದಿಂದಾಗಿ 6 ದಿನಗಳಿಂದ ಮುಚ್ಚಲ್ಪಟ್ಟಿದ್ದ ಮುಂಬಯಿ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೋಮವಾರ ಸಂಚಾರಕ್ಕೆ ಮುಕ್ತವಾಗಿದೆ. ಪ್ರವಾಹ ಇಳಿಮುಖವಾದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಹೆದ್ದಾರಿಯನ್ನು ಭಾಗಶಃ(ಒಂದು ಲೇನ್ ಮಾತ್ರ) ತೆರೆಯಲಾಗಿದೆ. ಉತ್ತರಾಖಂಡ, ಜಮ್ಮುವಿನಲ್ಲಿ 9 ಬಲಿ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಾಗೂ ಜಮ್ಮುವಿನಲ್ಲಿ ಭಾರೀ ಮಳೆಯಿಂದಾಗಿ ಸೋಮವಾರ ಸಂಭವಿಸಿದ ಭೂಕುಸಿತಕ್ಕೆ ಒಬ್ಬ ಮಹಿಳೆ, 9 ತಿಂಗಳ ಪುತ್ರಿ ಸೇರಿದಂತೆ 9 ಮಂದಿ ಬಲಿಯಾಗಿದ್ದಾರೆ. ಈ ನಡುವೆ, ಮ್ಯಾನ್ಮಾರ್ನಲ್ಲಿ ಶನಿವಾರ ಸಂಭವಿಸಿದ ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ ಸೋಮವಾರ 56ಕ್ಕೇರಿಕೆಯಾಗಿದೆ. ಅವಶೇಷಗಳಡಿ ಇನ್ನೂ ಹಲವರು ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲರ ಕಣ್ಣಂಚಲ್ಲೂ ನೀರು ತಂದ ದೃಶ್ಯ
ಸಾವಿನಲ್ಲೂ ಕಂದಮ್ಮನ ಕೈ ಬಿಟ್ಟಿರಲಿಲ್ಲ ಈ ತಾಯಿ!
ಎರಡು ದಿನಗಳ ಹಿಂದೆ ಭಯಾನಕ ಭೂಕುಸಿತಕ್ಕೆ ಸಾಕ್ಷಿಯಾದ ಕೇರಳದ ಕೊಟ್ಟಕ್ಕುನ್ನುವಿನಲ್ಲಿ ಅವಶೇಷಗಳಡಿ ಪತ್ತೆಯಾದ ಆ ತಾಯಿ-ಮಗುವಿನ ಮೃತದೇಹಗಳನ್ನು ನೋಡಿ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳೂ ತುಂಬಿ ಬಂದವು. 2 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಸೋಮವಾರ ಅವಶೇಷಗಳಡಿ ಇಬ್ಬರ ನಿಶ್ಚಲ ದೇಹಗಳು ರಕ್ಷಣಾ ಕಾರ್ಯಕರ್ತರ ಕಣ್ಣಿಗೆ ಬಿದ್ದವು. ಮಣ್ಣನ್ನು ಸರಿಸಿ ನೋಡಿ ದರೆ, ತನ್ನ ಕಂದಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದ ಸ್ಥಿತಿಯಲ್ಲೇ ತಾಯಿ-ಮಗುವಿನ ಮೃತದೇಹ ಕಂಡುಬಂದವು. 21 ವರ್ಷದ ಗೀತಾ, ತನ್ನ ಒಂದೂವರೆ ವರ್ಷದ ಗಂಡು ಮಗು ಧ್ರುವನನ್ನು ರಕ್ಷಿಸುವ ತವಕದಲ್ಲಿ ಗಟ್ಟಿಯಾಗಿ ಕೈಗಳನ್ನು ಹಿಡಿದಿದ್ದಳು. ಆದರೆ, ರಾಕ್ಷಸನಂತೆ ಎರಗಿದ ಮಣ್ಣಿನ ಗುಡ್ಡೆಯು ಆ ತಾಯಿಯ ಮೇಲೆ ಕರುಣೆ ತೋರಲೇ ಇಲ್ಲ. ಅಮ್ಮ-ಮಗುವಿನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ, ರಕ್ಷಣಾ ಕಾರ್ಯಕರ್ತರು ಸೇರಿದಂತೆ ಸ್ಥಳೀಯರೆಲ್ಲರೂ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಈ ಭೂಕುಸಿತದಲ್ಲಿ ಗೀತಾರ ಪತಿ ಶರತ್ವೊಬ್ಬರೇ ಬದುಕುಳಿದಿದ್ದಾರೆ. ಪತ್ನಿ ಗೀತಾ, ಪುತ್ರ ಧ್ರುವ ಮತ್ತು ತಾಯಿ ಸರೋಜಿನಿ ಸಜೀವ ಸಮಾಧಿಯಾಗಿದ್ದಾರೆ.