Advertisement

ಹಿರೇಕಲ್ಮಠದಲ್ಲಿ ಕದಳಿ ಕಾರ್ತಿಕೋತ್ಸವ

04:40 PM Dec 08, 2018 | Team Udayavani |

ಹೊನ್ನಾಳಿ: ಹಿರೇಕಲ್ಮಠದಲ್ಲಿ ಶುಕ್ರವಾರ ರಾತ್ರಿ ಕದಳಿ ಕಾರ್ತಿಕೋತ್ಸವವನ್ನು ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಗದ್ಗುರು ಜಡೆಶಂಕರಸ್ವಾಮಿ ಗದ್ದುಗೆಯಲ್ಲಿ ಜಡೆಶಂಕರ ಶಿವಬಾಚಾರ್ಯ ಸ್ವಾಮೀಜಿ ಮೂರ್ತಿಗೆ ವಿಶೇಷ ಕದಳಿ ಅಲಂಕಾರ ಮಾಡಿ ಶ್ರೀಗಳು ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ನಂತರ ಗದ್ದುಗೆ ಹೊರಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು, ಭಕ್ತರು ಹಣತೆಗಳನ್ನು ಹಚ್ಚಿ ದೀಪ ಬೆಳಗಿದರು.

Advertisement

ಕದಳಿ ಕಾರ್ತಿಕೋತ್ಸವ ಅಂಗವಾಗಿ ಸಿಡಿಮದ್ದು ಸುಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 20ಕ್ಕೂ ಹೆಚ್ಚು ಆಕಾಶಬುಟ್ಟಿಗಳನ್ನು ಹಾರಿಬಿಡಲಾಯಿತು. ಕಾರ್ತಿಕೋತ್ಸವದಲ್ಲಿ ಮಂಡಕ್ಕಿ, ಕೊಬ್ಬರಿ, ಬೆಲ್ಲ, ಪುಟಾಣಿ ಮಿಶ್ರಿತ ಪ್ರಸಾದ ವಿತರಿಸಲಾಯಿತು. ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು .

Advertisement

Udayavani is now on Telegram. Click here to join our channel and stay updated with the latest news.

Next