Advertisement

ಸಂಸ್ಕೃತಿ ಉಳಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ

11:05 AM Oct 29, 2021 | Team Udayavani |

ಬೀದರ: ಮಾಹಿತಿ ತಂತ್ರಜ್ಞಾನದ ಹೊಡೆತಕ್ಕೆ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಹಾಗೂ ಏಳ್ಗೆ ಕಾಣುತ್ತದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಮಹೇಶ ಪಾಟೀಲ ಹೇಳಿದರು.

Advertisement

ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಡೆದ ಜನಪದ ಕಲಾವಿದರ ಬಳಗದ 5ನೇ ವರ್ಷದ ವಾರ್ಷಿಕೋತ್ಸವ, ಜಿಲ್ಲಾ ಜನಪದ ಸಂಭ್ರಮ ಹಾಗೂ ಕನ್ನಡಕ್ಕಾಗಿ ನಾವು ಅಭಿಯಾನ ಅಂಗವಾಗಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ ಉಳಿಸಿ-ಬೆಳೆಸುವಲ್ಲಿ ವಿಜಯಕುಮಾರ ಸೋನಾರೆ ನೇತೃತ್ವದ ಕಲಾವಿದರ ಒಕ್ಕೂಟ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನದ ಮೂಲಕ ಮುಖ್ಯಮಂತ್ರಿಗಳು ಒಂದೇ ವೇದಿಕೆಯಡಿ ಏಕಕಾಲಕ್ಕೆ ಕನ್ನಡ ಗೀತ ಗಾಯನ ಕಾರ್ಯಕ್ರಮ ಆಯೋಜಿಸಿ ರುವುದು ಅಭಿನಂದನೀಯ. ಕನ್ನಡ ಭಾಷೆ ಉಳಿದಿರೆ, ಕನ್ನಡ ಹಾಗೂ ಕನ್ನಡಿಗರು ಮತ್ತು ಕರುನಾಡು ಉಳಿಯುತ್ತದೆ. ಕಲಾವಿದರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಜಿಲ್ಲೆಯ ಕಲಾವಿದರು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಅನೇಕ ಕಲಾ ಪ್ರಕಾರಗಳ ಕಾರ್ಯಕ್ರಮ ನೀಡುವ ನಿಜವಾದ ಕಲಾವಿದರಾಗಿದ್ದಾರೆ ಹೇಳಿದರು.

ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರಿಗೆ ಪ್ರಮಾಣಪತ್ರ ನೀಡಿ ಮೋಸ ಮಾಡುವ ಅನೇಕ ಸಂಸ್ಥೆಗಳು ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕಲಾವಿದರು ಕಾರ್ಯಕ್ರಮ ನೀಡುವ ಮುನ್ನ ಸಂಭಾವನೆ ನಿಗದಿ ಮಾಡಿಕೊಂಡು ಕಾರ್ಯಕ್ರಮ ಪ್ರಸ್ತುತ ಪಡಿಸಬೇಕು ಎಂದರು.

Advertisement

ಇದನ್ನೂ ಓದಿ: ರೌಡಿಕೊಲೆ: 11 ಮಂದಿ ಬಂಧನ

ಏಕತಾ ಫೌಂಡೇಶನ್‌ ಅಧ್ಯಕ್ಷ ರವಿ ಸ್ವಾಮಿ, ಹಿರಿಯ ಕಲಾವಿದ ಎಂ.ಜಿ. ಗಂಗನಪಳ್ಳಿ ಮಾತನಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕಲಾವಿದರಾದ ರಾಜೇಂದ್ರಸಿಂಗ್‌ ಪವಾರ, ರಾಮಲು ಗಾದಗಿ, ಕ.ಕ ಕಲಾವಿದರ ಒಕ್ಕೂಟದ ಸದಸ್ಯೆ ಲಲಿತಾ ಲೋಕು ಪವಾರ, ಉದ್ಯಮಿ ಅಮೋಸದಾಸ, ಸುನೀಲ ಭಾವಿಕಟ್ಟಿ, ಶಂಭುಲಿಂಗ ವಾಲ್ದೊಡ್ಡಿ, ಸೂರಜ್‌ಸಿಂಗ್‌ ರಾಜಪೂತ, ವೀರಭದ್ರಪ್ಪ ಉಪ್ಪಿನ, ಅಂಬರೀಶ ಹಸ್ಮಕಲ್‌ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಪ್ರತಿಜ್ಞಾವಿಧಿ ಬೋಧಿಸಿದರು. ಸುಧಾಕರ ಎಲ್ಲಾನೋರ್‌, ಸುನೀಲ ಕಡ್ಡೆ ನಿರೂಪಿಸಿದರು. ಯೇಸುದಾಸ ಅಲಿಯಂಬುರೆ ವಂದಿಸಿದರು.

ಮೆರವಣಿಗೆಗೆ ಕಲಾ ತಂಡಗಳ ಮೆರಗು

ಕನ್ನಡಾಂಬೆ ವೃತ್ತದಿಂದ ರಂಗ ಮಂದಿರದ ಸಭಾಂಗಣದವರೆಗೆ ನಡೆದ ಕಲಾ ತಂಡಗಳ ಮೆರವಣಿಗೆಗೆ ಔರಾದ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ವಿಜಯಕುಮಾರ ಜಾಧವ, ಪ್ರೊ| ಎಸ್‌.ವಿ. ಕಲ್ಮಠ, ವೀರಭದ್ರಪ್ಪ ಉಪ್ಪಿನ್‌ ಚಾಲನೆ ನೀಡಿದರು. ರಾಯಚೂರಿನ ಅಂಬರೀಶ ಹಸ್ಯಕಲ್‌ ತಂಡದ ಹಗಲುವೇಷ, ಬೀದರಿನ ಶೇಷಪ್ಪ ಚಿಟ್ಟಾ ತಂಡದ ಚರ್ಮವಾದ್ಯ, ಯಾದಗಿರಿಯ ಹಣಮಂತರಾಯ ದೇವರ್ಕಲ್‌ ತಂಡದ ಡೊಳ್ಳು ಕುಣಿತ, ಬೀದರನ ಅಜಯ ಯೇಸುದಾಸ ಅಲಿಯಂಬುರೆ ತಂಡದ ಮುಖವಾಡ ಮತ್ತು ಔರಾದನ ಪೈತ್ರಿ ಕುಣಿತ ಮೆರಗು ಹೆಚ್ಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next