Advertisement

ಗ್ರಾಮ ಪಂಚಾಯ್ತಿ ನೌಕರರ ಸಮಸ್ಯೆ ಶೀಘ್ರ ಪರಿಹಾರ 

05:05 AM Jul 20, 2017 | Team Udayavani |

ಬೆಂಗಳೂರು: ರಾಜ್ಯದ 51 ಸಾವಿರ ಗ್ರಾಪಂ ನೌಕರರ ಕನಿಷ್ಠ ವೇತನ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Advertisement

ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಕುರಿತು ಬುಧವಾರ ಗೃಹ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಪಂ ನೌಕಕರರ ಸಂಘದ ಪ್ರತಿನಿಧಿಗಳು, ಗ್ರಾಮೀಣಾಭಿವೃದ್ಧಿ ಸಚಿವರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಯವರು ಈ ಭರವಸೆ ನೀಡಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ “ಉದಯವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದ 6,024 ಗ್ರಾಪಂಗಳಲ್ಲಿ ಬಿಲ್‌ ಕಲೆಕ್ಟರ್‌, ಕಂಪ್ಯೂಟರ್‌ ಅಪರೇಟರ್‌, ಪಂಪ್‌ ಆಪರೇಟರ್‌, ಜವಾನರು,
ಜಾಡಮಾಲಿಗಳು ಸೇರಿ ಒಟ್ಟು 51 ಸಾವಿರ ನೌಕರರಿದ್ದಾರೆ. ಈ ಪೈಕಿ ಬಿಲ್‌ ಕಲೆಕ್ಟರ್‌ ಮತ್ತು ಕಂಪ್ಯೂಟರ್‌ ಅಪರೇ
ಟರ್‌ಗಳಿಗೆ ಮಾಸಿಕ ತಲಾ 13 ಸಾವಿರ, ಪಂಪ್‌ ಅಪರೇಟರ್‌ಗಳಿಗೆ 11 ಸಾವಿರ, ಜವಾನರಿಗೆ 10 ಸಾವಿರ ಹಾಗೂ ಜಾಡ ಮಾಲಿಗಳಿಗೆ 9 ಸಾವಿರ ರೂ. ಕನಿಷ್ಠ ವೇತನ ನಿಗದಿಯಾಗಿದೆ. ಆದರೆ, ಇದನ್ನು ಸಮರ್ಪಕವಾಗಿ ಜಾರಿಗೊಳಿಸಿರಲಾಗಿರಲಿಲ್ಲ. ಹಲವು ವರ್ಷಗಳಿಂದ ನೌಕರರುಈ ಬೇಡಿಕೆ ಇಟ್ಟಿದ್ದರು. ಅದರಂತೆ ಸಭೆಯಲ್ಲಿ ಬೇಡಿಕೆ ಆಲಿಸಿದ ಮುಖ್ಯಮಂತ್ರಿ,ಸೂಕ್ತ ಕ್ರಮ ಕೈಗೊಳ್ಳುವ ಖಚಿತ ಭರವಸೆನೀಡಿದ್ದಾರೆ ಎಂದು ತಿಳಿಸಿದರು.

ಉಳಿದಂತೆ, ಬಿಲ್‌ಕಲೆಕ್ಟರ್‌ಗಳಿಗೆ ಗ್ರಾ.ಪಂ. ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಲು ಪಿಯುಸಿ ಬದಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಮಾನದಂಡ ಮುಂದುವರಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next