Advertisement
ಪ್ರಸನ್ನಕುಮಾರ್ (31) ಬಂಧಿತ ಆರೋಪಿ. ಘಟನೆ ಸಂಬಂಧ ಸಂತ್ರಸ್ತೆ ಮೇ 15ರಂದು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಅಂಧರ ಸಂಸ್ಥೆಯೊಂದರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಅಗರಬತ್ತಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡ ಆರೋಪಿ, ಬಳಿಕ ಆಕೆಯ ಮಗನ ರೋಗದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಕೃತ್ಯವೆಸಗಿದ್ದಾನೆ.
Related Articles
Advertisement
ಬಳಿಕ ಮೊಬೈಲ್ನಲ್ಲಿ ನಗ್ನ ದೇಹದ ಫೋಟೋಗಳನ್ನು ತೆಗೆದುಕೊಂಡು, ನಿನ್ನ ದೇಹದಲ್ಲಿ ಸಮಸ್ಯೆಯಿದೆ. ನನ್ನೊಂದಿಗೆ ಸಂಭೋಗ ನಡೆಸಿದರೆ, ನಿನ್ನ ಮಗನ ರೋಗ, ನಿನ್ನ ಪತಿಯ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿ ಸಂಭೋಗ ನಡೆಸಿದ್ದಾನೆ.
ಎರಡು ದಿನಗಳ ಬಳಿಕ ಮತ್ತೆ ಬಂದ ಆರೋಪಿ, ನಿನ್ನ ನಗ್ನ ದೇಹದ ಫೋಟೋಗಳನ್ನು ಲ್ಯಾಪ್ಟಾಪ್ನಲ್ಲಿ ಹಾಕಿಕೊಂಡು ನೋಡಿದೆ. ನಿನ್ನ ದೇಹದಲ್ಲಿ ದೋಷವಿದೆ. ಏಳು ಬಾರಿ ನನ್ನೊಂದಿಗೆ ಸಂಭೋಗ ನಡೆಸಿದರೆ ಎಲ್ಲವೂ ಪರಿಹಾರ ಆಗುತ್ತದೆ ಎಂದು ಹೇಳಿ ಅಷ್ಟು ಬಾರಿಯೂ ಸಂಭೋಗ ನಡೆಸಿದ್ದಲ್ಲದೇ, ನಗದು, ಚಿನ್ನಾಭರಣ ಕೂಡ ದೋಚಿದ್ದಾನೆ.
ಜತೆಗೆ ಅನೈತಿಕ ಸಂಬಂಧದ ಬಗ್ಗೆ ಪತಿಗೆ ಹೇಳುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿಯ ಡೆಬಿಟ್ ಕಾರ್ಡ್ನಿಂದ 75 ಸಾವಿರ, ಚೆಕ್ಗಳ ಮೂಲಕ 9 ಲಕ್ಷ, ನಗದು ರೂಪದಲ್ಲಿ 11 ಲಕ್ಷ ಹಣ ಮತ್ತು ಚಿನ್ನಾಭರಣ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಂಧರ ಸಂಸ್ಥೆಯೇ ಇಲ್ಲಮಲ್ಲೇಶ್ವರದಲ್ಲಿರುವ ಅಂಧರ ಸಂಸ್ಥೆಯ ಸೇವಕ ಎಂದು ಪರಿಚ ಯಿಸಿಕೊಂಡಿದ್ದ ಪ್ರಸನ್ನ, ಕರ್ಟಸಿ ಫೌಂಡೇಷನ್ ಹೆಸರಿನಲ್ಲಿ ರಸೀದಿ ಕೊಡುತ್ತಿದ್ದ. ಆದರೆ, ಆ ಹೆಸರಿನ ಯಾವುದೇ ಅಂಧ ಸಂಸ್ಥೆ ಇಲ್ಲ. ಆದರೆ, ಮಹಿಳೆಯಿಂದ ದೋಚಿದ್ದ ಹಣದ ಪೈಕಿ 9 ಲಕ್ಷವನ್ನು ಕಾಂತ ರಾಜ್, 5 ಲಕ್ಷವನ್ನು ಶಿವರಾಜ್ ಎಂಬುವರಿಗೆ ತಿಂಗಳ ಬಡ್ಡಿ ಲೆಕ್ಕದಲ್ಲಿ ಸಾಲವಾಗಿ ಕೊಟ್ಟಿದ್ದ. ಇನ್ನು ಚಿನ್ನಾಭರಣಗಳನ್ನು, ತನ್ನ ಸ್ನೇಹಿತ ನದ್ದು ಎಂದು ತಾಯಿಗೆ ಸುಳ್ಳು ಹೇಳಿ ಅವರಿಂದಲೇ ಗಿರವಿ ಇಡಿಸಿದ್ದ ಎಂದು ಮೂಲಗಳು ತಿಳಿಸಿವೆ.