Advertisement

ಉತ್ತರಾಧಿಕಾರಿ ನೇಮಕ ಪೂರ್ವಭಾವಿ ಪ್ರಕ್ರಿಯೆ ಆರಂಭ

11:15 PM May 07, 2019 | Team Udayavani |

ಉಡುಪಿ: ಪಲಿಮಾರು ಮಠದ 31ನೇ ಪೀಠಾಧಿಪತಿಯಾಗಿ ನಿಯೋಜನೆಗೊಳ್ಳಲಿರುವ ಕೊಡವೂರು ಕಂಬಳಕಟ್ಟದ ಶೈಲೇಶ್‌ ಉಪಾಧ್ಯಾಯ ಅವರ ಸನ್ಯಾಸಾಶ್ರಮ ಸ್ವೀಕಾರದ ಪೂರ್ವಭಾವಿ ಪ್ರಕ್ರಿಯೆಗಳು ಅಕ್ಷಯ ತೃತೀಯಾದಂದು ಆರಂಭಗೊಂಡಿವೆ.

Advertisement

ಇದರಂಗವಾಗಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿದರು. ಇದಕ್ಕೂ ಮುನ್ನ ಶೈಲೇಶರು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಅಂಬಲಪಾಡಿಯ ನಿವಾಸದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.

ಏಳು ಶತಮಾನಗಳ ಹಿಂದೆ ಆಚಾರ್ಯ ಮಧ್ವರ ಶಾಸ್ತ್ರ ವಿಚಾರಗಳನ್ನು ಲಿಪಿಬದ್ಧಗೊಳಿಸಿದ ಪಲಿಮಾರು ಮಠದ ಮೂಲ ಯತಿ ಶ್ರೀ ಹೃಷಿಕೇಶ ತೀರ್ಥರ ಸರ್ವಮೂಲಗ್ರಂಥದ ಅಧ್ಯಯನ, ಸಂಶೋಧನೆಯನ್ನು ನಡೆಸಿದ ಗೋವಿಂದಾಚಾರ್ಯರು, “ಶೈಲೇಶರಿಂದ ಶುದ್ಧ ತಣ್ತೀಜ್ಞಾನ ಪ್ರಸಾರದ ಕೆಲಸ ನಡೆಯುವಂತಾಗಲಿ’ ಎಂದು ಭಾವಪೂರ್ಣವಾಗಿ ಹಾರೈಸಿದರು.

ಶ್ರೀಕೃಷ್ಣ ಮಠದಲ್ಲಿ ಮೇ 9ರಂದು ಪ್ರಾಯಶ್ಚಿತ್ತಾದಿ ಹೋಮಗಳು, ವಿರಜಾ ಹೋಮ, ಆತ್ಮಶ್ರಾದ್ಧ, ಮೇ 10ರಂದು ಸನ್ಯಾಸಾಶ್ರಮ ಸ್ವೀಕಾರ, ಪ್ರಣವ ಮಂತ್ರೋಪದೇಶ, ಮೇ 11ರಂದು ವಿವಿಧ ಮಂತ್ರಗಳ ಉಪದೇಶ, ಮೇ 12ರಂದು ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next