Advertisement

Ramanagar: ಜಿಲ್ಲೆಯಲ್ಲಿ 92 ಗ್ರಾಮಲೆಕ್ಕಾಧಿಕಾರಿ ಹುದ್ದೆ ಖಾಲಿ

03:18 PM Dec 14, 2023 | Team Udayavani |

ರಾಮನಗರ: ರೈತರ ಜಮೀನಿನ ದಾಖಲೆಗಳ ಸಿದ್ಧತೆ, ಬರ, ನೆರೆ, ಚುನಾವಣೆ, ಪಡಿತರ ಚೀಟಿ ವಿತರಣೆ ಹೀಗೆ ಹತ್ತು ಹಲವು ಸರ್ಕಾರದ ಕಾರ್ಯಕ್ರಮಗಳನ್ನು ತಳಮಟ್ಟದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇದ್ದು, ಇದರಿಂದಾಗಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ.

Advertisement

ಗ್ರಾಮಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಗ್ರಾಮಲೆಕ್ಕಾಧಿ ಕಾರಿ ಗಳಿಗೆ ಹೆಚ್ಚಿನ ಹೊರೆ ಬಿದ್ದಿದ್ದು, ಪ್ರಭಾರದ ಭಾರ ದಿಂದಾಗಿ ಗ್ರಾಮಲೆಕ್ಕಾಧಿಕಾರಿಗಳು ರೈತರಿಗೆ ಸರಿಯಾದ ಸೇವೆ ಒದಗಿಸಲಾಗದೆ ಪರದಾಡುತ್ತಿದ್ದಾರೆ. ರೈತರಿಗೆ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ತಲು ಪಿಸುವಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕೊರತೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ.

92 ಹುದ್ದೆಗಳು ಖಾಲಿ: ರಾಮನಗರ ಜಿಲ್ಲೆಯಲ್ಲಿ 242 ಗ್ರಾಮಲೆಕ್ಕಾಧಿಕಾರಿಗಳ ವೃತ್ತವಿದ್ದು, ಗ್ರಾಮೀಣ ಭಾಗ ದಲ್ಲಿ ಕಾರ್ಯ ನಿರ್ವಹಿಸಲು ಪ್ರತಿ ವೃತ್ತಕ್ಕೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಅವಶ್ಯಕತೆ ಇದೆ. ಆದರೆ, ಜಿಲ್ಲೆಯಲ್ಲಿ 92 ಗ್ರಾಮ ಲೆಕ್ಕಾಧಿ ಕಾರಿಗಳ ಹುದ್ದೆ ಖಾಲಿಯಿದ್ದು, ಹಲವು ವರ್ಷಗಳಿಂದ ಸಮರ್ಪಕವಾಗಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಹೊಸ ಬರನ್ನು ನೇಮಕ ಮಾಡಿ ಕೊಳ್ಳದಿರುವುದು ಹುದ್ದೆಗಳು ಖಾಲಿ ಉಳಿಯುವುದಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಹುದ್ದೆ ಖಾಲಿಯಾಗುತ್ತಲೇ ಇದೆ: ಹಲವು ವರ್ಷಗಳಿಂದ ಹೊಸದಾಗಿ ಗ್ರಾಮ ಲೆಕ್ಕಾಧಿ ಕಾರಿಗಳನ್ನು ನೇಮಕ ಮಾಡಿಕೊಂಡಿಲ್ಲ. ನಿವೃತ್ತಿ ಹೊಂದಿದ, ಬೇರೆ ಜಿಲ್ಲೆಗೆ ವರ್ಗಾವಣೆ ಗೊಂಡಿದ್ದು, ಪ್ರತಿ ವರ್ಷ ಹುದ್ದೆ ಖಾಲಿಯಾಗುತ್ತಲೇ ಇದೆ ಯಾ ದರೂ, ಹೊಸದಾಗಿ ನೇಮಕ ಮಾಡಿ ಕೊಳ್ಳುವ ಪ್ರಕ್ರಿಯೆ ಮಾತ್ರ ಇನ್ನೂ ನಡೆದಿಲ್ಲ. ಸರ್ಕಾ ರದ ಮಟ್ಟದಲ್ಲಿ ಹುದ್ದೆಗಳ ನೇಮಕಾತಿ ನಡೆಯ ಬೇಕಿದ್ದು, ಅಲ್ಲಿಯವರೆಗೆ ಏನೂ ಮಾಡಲಾಗದು ಎಂಬ ಅಸಹಾ ಯಕತೆಯನ್ನು ಅಧಿಕಾರಿ ಗಳು ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2010 ಮತ್ತು 2015ರಲ್ಲಿ ನೇಮಕಾತಿ ನಡೆದಿದ್ದನ್ನು ಹೊರತು ಪಡಿಸಿ ದರೆ ಇದುವರೆಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.

ಪ್ರಮುಖ ಜವಾಬ್ದಾರಿಗಳು ವಿಎ ಹೆಗಲಿಗೆ: ಗ್ರಾಮ ಲೆಕ್ಕಾಧಿಕಾರಿಗಳು ರೈತರ ಜಮೀನಿನ ದಾಖಲೆಗಳನ್ನು ನೀಡುವ ಜೊತೆಗೆ, ಬೆಳೆ ಸಮೀಕ್ಷೆ, ಬೆಳೆ ಹಾನಿ, ಮತದಾರ ಪಟ್ಟಿ ಪರಿಷ್ಕರಣೆ ಹೀಗೆ 32 ವಿವಿಧ ಕೆಲಸಗಳನ್ನು ಗ್ರಾಮಮಟ್ಟದಲ್ಲಿ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ರೈತರ ಭೂದಾಖಲೆಗಳ ವಿಚಾರದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಪಾತ್ರ ಸಾಕಷ್ಟಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರ ಚುರುಕಿನಿಂದ ನಡೆಯುವ ಜಿಲ್ಲೆಯಲ್ಲಿ ರೈತರ ಜಮೀನಿನ ಖಾತೆ ಬದಲಾವಣೆ ಸೇರಿದಂತೆ ಹಲವು ಕಾರ್ಯಗಳ ಒತ್ತಡ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಇದೆ. ಇದರೊಂದಿಗೆ ಚುನಾವಣಾ ಸಮಯದಲ್ಲಿ ಮತದಾರರಪಟ್ಟಿ ಪರೀಷ್ಕರಣೆಯಿಂದ ಪ್ರಾರಂಭವಾಗುವ ಗ್ರಾಮ ಲೆಕ್ಕಾಧಿಕಾರಿಗಳ ಜವಾಬ್ದಾರಿ, ಮತ ಏಣಿಕೆ ಮುಕ್ತಾಯವಾಗುವವರೆಗೆ ಇರುತ್ತದೆ. ನೀತಿ ಸಂಹಿತೆ ಜಾರಿ, ಚುನಾವಣಾ ಮತಗಟ್ಟೆಗಳನ್ನು ಗುರುತಿಸುವುದು, ಮತದಾನದ ದಿನ ಮತದಾನ ಕೇಂದ್ರಗಳಿಗೆ ಮೂಲ ಸೌಕರ್ಯ ಸೇರಿದಂತೆ ಹಲವು ಕುಂದುಕೊರತೆಗಳ ಮೇಲುಸ್ತವಾಗಿ ಹೀಗೆ ಸಾಕಷ್ಟು ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಭಾರ ಸಾಕಷ್ಟಿದೆ.

Advertisement

ಪ್ರಭಾರ ಭಾರಕ್ಕೆ ನಲುಗಿದ ವಿಎಗಳು: 92 ಮಂದಿ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ವೃತ್ತಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿಗಳಿಗೆ ಹೆಚ್ಚುವರಿಯಾಗಿ ಪ್ರಭಾರ ವಹಿಸಲಾಗಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿಗಳು 2ರಿಂದ 4 ವೃತ್ತಗಳಿಗೆ ಪ್ರಭಾರ ವಿದ್ದು, ಹೆಚ್ಚುವರಿ ಕೆಲಸದ ಒತ್ತಡದಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳು ಸಕಾಲದಲ್ಲಿ ರೈತರಿಗೆ ಇಲಾಖೆಯ ಸೇವೆಗಳನ್ನು ತಲುಪಿಸಲು ಪರದಾಡುವಂತಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ರೈತರ ವಿವರಗಳನ್ನು ಫ್ರೂಟ್‌ ಐಡಿಯಲ್ಲಿ ನೋಂದಣಿ ಮಾಡಬೇಕಿದ್ದು, ಬರಪರಿ ಹಾರ ರೈತರಿಗೆ ತಲುಪಬೇಕಾಗಿದ್ದರೆ ಅದಕ್ಕೆ ಎಫ್‌ ಐಡಿಯಲ್ಲಿ ನೋಂದಣಿ ಮಾಡಬೇಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮರು ಸರ್ವೆ ಕಾರ್ಯ, ಪೋಡಿ ಮುಕ್ತ ಅಭಿಯಾನ ಹೀಗೆ ಹಲವು ಕಂದಾಯ ಇಲಾಖೆ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಹೆಚ್ಚು ವೃತ್ತಗಳ ಪ್ರಭಾರದಲ್ಲಿರುವ ಗ್ರಾಮಲೆಕ್ಕಾಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸಕಾಲಕ್ಕೆ ರೈತರ ಕೆಲಸ ಕಾರ್ಯಗಳು ನಡೆಯದಾಗಿದೆ.

ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಸಾಕಷ್ಟು ಪ್ರಾಮು ಖ್ಯತೆ ಪಡೆದಿದೆ. ಒಬ್ಬ ಗ್ರಾಮಲೆಕ್ಕಾಧಿಕಾರಿಗೆ ಎರಡು ಮೂರು ವೃತ್ತದ ಜವಾಬ್ದಾರಿ ವಹಿಸಿ ರುವುದರಿಂದ ರೈತರಿಗೆ ತೊಂದರೆಯಾ ಗುತ್ತಿದೆ. ಕೂಡಲೇ ಜಿಲ್ಲಾಡಳಿತ ಖಾಲಿ ಹುದ್ದೆ ಭರ್ತಿ ಮಾಡ ಬೇಕು. ಹಾಗೂ ಗ್ರಾಮ ಲೆಕ್ಕಾಧಿ ಕಾರಿಗಳು ಪ್ರತಿದಿನ ತಮಗೆ ಕರ್ತವ್ಯ ನಿರ್ವಹಣೆಗೆ ಸೂಚಿಸಿರುವ ವೃತ್ತದಲ್ಲೇ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ● ಎಚ್‌.ಕೃಷ್ಣಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ, ರಾಜ್ಯ ರೈತಸಂಘ ರಾಮನಗರ

ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದ ನಾವು ಒತ್ತಡಕ್ಕೆ ಸಿಲುಕಿರುವ ಬಗ್ಗೆ, ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅನ್ಯ ಇಲಾಖೆ ಕೆಲಸದ ಒತ್ತಡವನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ. ● ಎನ್‌.ರಮೇಶ್‌,ಗೌರವಾಧ್ಯಕ್ಷ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next