Advertisement

Kollur ಚಿಕಿತ್ಸೆಗೆ ಸ್ಪಂದಿಸದೇ ವ್ಯಕ್ತಿ ಸಾವು

01:07 AM Jan 28, 2024 | Team Udayavani |

ಕೊಲ್ಲೂರು: ಇಲ್ಲಿನ ನಿವಾಸಿಯೊರ್ವರು ಯಕೃತ್‌ ಖಾಯಿಲೆಗೆ ತೆಗೆದುಕೊಳ್ಳುವ ಔಷಧ ಎಂದು ಭ್ರಮಿಸಿ ಇಲಿಗೆ ಹಾಕುವ ವಿಷವನ್ನು ಆಕಸ್ಮಿಕವಾಗಿ ತಿಂದು ಅಸ್ವಸ್ಥಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಜ. 25ರಂದು ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಕೊಲ್ಲೂರು ನಿವಾಸಿ ಸುರೇಶ (44) ಮೃತಪಟ್ಟವರು. ಜ. 21ರಂದು ಅವರು ಆಕಸ್ಮಿಕವಾಗಿ ಇಲಿಗೆ ಹಾಕುವ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಜ. 23ರಂದು ಅವರನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು.

ಬೈಕಿಗೆ ಟಿಪ್ಪರ್‌ ಢಿಕ್ಕಿ; ಸಹಸವಾರ ಗಂಭೀರ
ಸಿದ್ದಾಪುರ: ಸಿದ್ದಾಪುರ ಗ್ರಾಮದ ಜನ್ಸಾಲೆಯಲ್ಲಿ ಅತೀ ವೇಗವಾಗಿ ಬಂದ ಟಿಪ್ಪರ್‌ ಬೈಕಿಗೆ ಢಿಕ್ಕಿ ಹೊಡೆದಿದ್ದು ಬೈಕ್‌ ಸವಾರ ಸುರೇಶ ಮತ್ತು ಸಹಸವಾರ ಪದ್ಮನಾಭ ಅವರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ಪದ್ಮನಾಭ ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಮೂಡ್ಲಕಟ್ಟೆಯ ರೈಲು ನಿಲ್ದಾಣದ 1ನೇ ಪ್ಲಾಟ್‌ಫಾರಂನ ರೈಲ್ವೇ ಹಳಿಯಲ್ಲಿ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಜ. 26ರಂದು ರಾತ್ರಿ 8.30ಕ್ಕೆ ನಡೆದಿದೆ.

ಮೃತಪಟ್ಟವರ ಬಟ್ಟೆಯಲ್ಲಿ ಇರುವ ಪ್ಲಾಟ್‌ಫಾರಂ ಟಿಕೆಟ್‌ನಲ್ಲಿ ಸಂಜೆ 6.28ಕ್ಕೆ ಟಿಕೆಟ್‌ ಪಡೆದಿದ್ದರು. ನಿಲ್ದಾಣದ ಅನಿಲ್‌ ಕುಮಾರ್‌ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾರ್ಮಿಕ ಕುಸಿದು ಬಿದ್ದು ಸಾವು
ಕೋಟ: ಹಾರ್ದಳ್ಳಿ ಮಂಡಳ್ಳಿಯ ತೋಟದ ಕೆಲಸ ನಿರ್ವಹಿಸುತ್ತಿದ್ದ ಹೊಸನಗರದ ರಾಮಚಂದ್ರ (44) ವಿಪರೀತ ಮದ್ಯಸೇವನೆ ಮಾಡಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸ
ಲಾಗಿತ್ತು. ಅವರು ಜ.25ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next