Advertisement

ಕಾಂಗ್ರೆಸ್‌ ಸಂಸದನ ಕಡೆ ಗನ್‌ ತೋರಿಸಿದ ಪೇದೆ ಸಸ್ಪೆಂಡ್‌

11:10 AM Dec 17, 2017 | Team Udayavani |

ಛಿಂದ್ವಾರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಾಂಗ್ರೆಸ್‌ ನಾಯಕ, ಸಂಸದ ಕಮಲ್‌ನಾಥ್‌ ಕಡೆ ಪೊಲೀಸ್‌ ಪೇದೆಯೊಬ್ಬರು ಲೋಡೆಡ್‌ ಬಂದೂಕನ್ನು ಗುರಿಯಿಟ್ಟ ಘಟನೆ ಆತಂಕಕ್ಕೆ ಎಡೆಮಾಡಿತ್ತು. ಆ ಪೇದೆಯನ್ನು ಶನಿವಾರ ಬಂಧಿಸಿ, ಹಿರಿಯ ಪೊಲೀಸ್‌ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. “ನಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ.

Advertisement

ಬಂದೂಕನ್ನು ಒಂದು ಭುಜದಿಂದ ಮತ್ತೂಂದು ಭುಜಕ್ಕೆ ಬದಲಿಸುವಾಗ ಈ ರೀತಿ ಆಗಿದೆ’ ಎಂದು ಪೇದೆ ಹೇಳಿದ್ದಾರೆ. ಸದ್ಯಕ್ಕೆ ಈ ಪೇದೆಯನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next