Advertisement

ಗೇಟ್‌ ತಳ್ಳಾಡಿ ವಲಸೆ ಕಾರ್ಮಿಕರ ಆಕ್ರೋಶ

04:28 AM May 24, 2020 | Lakshmi GovindaRaj |

ಬೆಂಗಳೂರು: ನಗರದಿಂದ ಬೇರೆ ರಾಜ್ಯಗಳಿಗೆ ತೆರಳಲು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನದಲ್ಲಿ ಸೇರಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಕುರಿತು ಪಾಲಿಕೆ ಅಧಿಕಾರಿಗಳು ಸೂಕ್ತ ಮಾಹಿತಿ  ನೀಡದ ಹಿನ್ನೆಲೆಯಲ್ಲಿ ಶನಿವಾರ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ವಲಸೆ ಕಾರ್ಮಿಕರಿಗೆ ಅರಮನೆ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

ಶನಿವಾರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಶ್ರಮಿಕ  ರೈಲಿನಲ್ಲಿ ಕಳುಹಿಸುವ ಬಗ್ಗೆ ಹಲವರಿಗೆ ಮೆಸೇಜ್‌ ಮೂಲಕ ದೃಢಪಡಿಸಲಾಗಿತ್ತು. ಆದರೆ, ನಿಗದಿಗಿಂತ ಹೆಚ್ಚು ಜನ ಸೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಯಿತು. ಅಲ್ಲದೆ, ವಲಸೆ ಕಾರ್ಮಿಕರಲ್ಲಿ ಹಲವರು ಬಾಡಿಗೆಗೆ ಇದ್ದ ಮನೆಗಳನ್ನು ಖಾಲಿ ಮಾಡಿಕೊಂಡು ಬಂದಿದ್ದರು.  ಶನಿವಾರ ಊರುಗಳಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆಯೇ ವಲಸೆ ಕಾರ್ಮಿ  ಕರು, ಗೇಟ್‌ ತಳ್ಳಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ  ಪ್ರತಿಕ್ರಿಯಿಸಿದ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಜಂಟಿ ಆಯುಕ್ತ ಸಫ‌ರಾಜ್‌ಖಾನ್‌, ಶ್ರಮಿಕ ರೈಲು ರದ್ದಾದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿ  ಯಾಯಿತು. ಎಲ್ಲರಿಗೂ ಸಂದೇಶ ಬಂದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಒಂದೆಡೆ  ಸೇರಿದ್ದರು. ಎಲ್ಲಾ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ   ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಅರಮನೆ ಮೈದಾನದಲ್ಲಿ ಒಟ್ಟು 6 ಸಾವಿರ ವಲಸೆ ಕಾರ್ಮಿಕರು ಸೇರಿದ್ದು, ಇವರನ್ನು 2-3 ದಿನಗಳಲ್ಲಿ ಹಂತ ಹಂತವಾಗಿ  ಅವರ ಊರುಗಳಿಗೆ ಕಳುಹಿಸಲಾಗುವುದು.

ಅಲ್ಲಿಯವರೆಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪಾಲಿಕೆ ಮಾಡಿ ಕೊಂಡಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿದ್ದ ಅಸ್ಸಾಂ ನ 60 ಮಂದಿ ವಲಸೆ  ಕಾರ್ಮಿಕರು, ಬಸ್‌ನಲ್ಲಿ ಅವರ ಊರುಗಳಿಗೆ ತೆರಳಿದ್ದಾರೆ.  ಅರಮನೆ ಮೈದಾನ ದಿಂದ300 ಜನರನ್ನು ಹಾಗೂ  ಯಲಹಂಕದ ಮ್ಯಾನ್ಫೋ ಕನ್ವೆನನ್‌ ಸೆಂಟರ್‌ನಿಂದ 1,500 ಜನರನ್ನು ಜಾರ್ಖಂಡ್‌ಗೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ವಲಸಿಗರಿಗೆ ಚಪಾತಿ ಆಸರೆ: ನಗರ ಜಿಲ್ಲಾಡಳಿತದ ವ್ಯಾಪ್ತಿಯ ಸ್ತ್ರೀ ಸ್ವಸಹಾಯ ಸಂಘಗಳು ವಲಸಿಗರ ಹಸಿವು ನೀಗಿಸುವಲ್ಲಿ ನಿರತವಾಗಿವೆ. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ ಗ್ರಾಪಂನ ಸ್ನೇಹ ಸಿOಉàಶಕ್ತಿ ಸ್ವಸಹಾಯ  ಸಂಘ ಉತ್ತರ ಭಾರತದ ಮೂಲದ ವಲಸಿಗರಿಗೆ ಚಪಾತಿ ತಯಾರಿಸಿ ಉಚಿತವಾಗಿ ನೀಡುತ್ತಿದೆ.

Advertisement

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಸರೆ ಪಡೆದಿರುವ ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳದ 200 ಮಂದಿ ಕೂಲಿ ಮತ್ತು  ಕಟ್ಟಡ ಕಾರ್ಮಿಕರು ಅಲ್ಲಿದ್ದು ಅವರೆಲ್ಲ ರಿಗೂ ಒಂದು ಸಲ ಸುಮಾರು 800 ರಿಂದ 1000 ವರೆಗೂ ಚಪಾತಿಗಳನ್ನು ತಯಾರು ಮಾಡಲಾ ಗುತ್ತದೆ ಎಂದು ಸ್ನೇಹ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಂಚಾಲಕಿ ಭವಾನಿ ಹೇಳಿದ್ದಾರೆ. ತಮ್ಮೂರಿಗೆ ತೆರಳಲು ರೈಲುಗಾಗಿ ಕಾಯುತ್ತಿದ್ದು ಅವರೆಲ್ಲರ ಹಸಿವು ನೀಗಿಸುವ ಕೆಲಸವನ್ನು ಸ್ಥಳೀಯ ಸಿOಉà ಶಕ್ತಿ ಸಂಘಗಳು ಮಾಡುತ್ತಿವೆ.

ಕುಸಿದು ಬಿದ್ದ ವ್ಯಕ್ತಿ: ಸ್ಥಳದಲ್ಲಿ ಊರಿಗೆ ಹಿಂತಿರುಗಲು ಆಗಮಿಸಿದ್ದ ಒಡಿಶಾ ಮೂಲದ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿಗೆ ಸಚಿವ ಡಾ. ಕೆ. ಸುಧಾಕರ್‌ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ  ಕಳುಹಿಸಿಕೊಟ್ಟರು.  ಒಡಿಶಾ ಮೂಲದ ಎರ್ಸಾದ್‌ ಎಂಬಾತ ದಿಢೀರ್‌ ಎಂದು ಕುಸಿದು ಬಿದ್ದು ಒದ್ದಾಡತೊಡಗಿದ್ದನ್ನು ಗಮನಿಸಿದ ಸಚಿವರು ತಕ್ಷಣ  ಆತನಲ್ಲಿಗೆ ತೆರಳಿ ಆತನನ್ನು ಪರೀಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಆತನನ್ನು ಪೊಲೀಸ್‌ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಸಚಿವರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next