Advertisement

ಅರಿವು ಮೂಡಿಸಲು ಬಂದವನನ್ನೇ ಕೊಂದರು

06:00 AM Jun 30, 2018 | |

ಅಗರ್ತಲಾ: ಮಕ್ಕಳ ಕಳ್ಳರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುಳ್ಳು ಸಂದೇಶಗಳ ಬಗ್ಗೆ ಅರಿವು ಮೂಡಿಸಲು ನೇಮಿಸಲ್ಪಟ್ಟಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರನ್ನೇ ಮಕ್ಕಳ ಕಳ್ಳರೆಂದು ಅನುಮಾನಿಸಿ, ಅವರನ್ನೇ ಥಳಿಸಿ ಕೊಂದು ಹಾಕಿರುವ ಪ್ರಕರಣ ತ್ರಿಪುರಾದಲ್ಲಿ ನಡೆದಿದೆ.

Advertisement

ಸುಕಾಂತ ಚಕ್ರಬರ್ತಿ (33) ಮೃತ ದುರ್ದೈವಿ. ಸುಳ್ಳು ಸುದ್ದಿಗಳ ವ್ಯಾಪಕ ಹರಡುವಿಕೆಯಿಂದ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ತ್ರಿಪುರಾ ಸರ್ಕಾರ ತಂಡವೊಂದನ್ನು ನೇಮಿಸಿತ್ತು. ಸುಕಾಂತ ಅವರು ಆ ತಂಡದ ಸದಸ್ಯರಾಗಿದ್ದರು. ಸುಳ್ಳು ಸುದ್ದಿಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ದಕ್ಷಿಣ ತ್ರಿಪುರಾದ ಕಲಾಚ್ಚರಾಕ್ಕೆ ಅವರು ಭೇಟಿ ನೀಡಿದ್ದರು. ಆದರೆ ಅವರನ್ನೇ ಮಕ್ಕಳ ಕಳ್ಳನೆಂದು ಭಾವಿಸಿದ ಜನರು ಅವರನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಜಕೀಯ ತಿರುವು: ಘಟನೆ ಬಗ್ಗೆ ಖೇದ ವ್ಯಕ್ತ ಪಡಿಸಿರುವ ಮುಖ್ಯ ಮಂತ್ರಿ ಬಿಪ್ಲಬ್‌ ದೇವ್‌, ತ್ರಿಪುರಾದಲ್ಲಿ ಮಕ್ಕಳ ಕಳ್ಳರಿಲ್ಲವೆಂದು ಅಭಯ ನೀಡಿದ್ದಾರೆ. ಜತೆಗೆ, ಘಟನೆಗೆ ಸಿಪಿಎಂ ಕಾರಣವೆಂದು ಆರೋಪಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next